ಸಿಧು ಮೊದಲು ಅಮರಿಂದರ್ ಬಳಿ ಕ್ಷಮೆ ಕೇಳಬೇಕು: ಸಿಎಂ ಸಲಹೆಗಾರ
ಚಂಡೀಗಢ, ಜುಲೈ 21: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಳಿ ನವಜೋತ್ ಸಿಂಗ್ ಸಿಧು ಮೊದಲು ಕ್ಷಮೆ ಯಾಚಿಸಬೇಕು ಬಳಿಕ ಅವರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಮಾಹಿತಿ ನೀಡಿದ್ದಾರೆ.
ಅಮರಿಂದರ್ ಸಿಂಗ್ ಅವರು "ನನ್ನ ವಿರುದ್ಧ ಸಿಧು ಮಾಡಿದ್ದ ಅವಹೇಳನಕಾರಿ ಟ್ವೀಟ್ ಗಳಿಗೆ ಕ್ಷಮೆ ಕೋರುವವರೆಗೂ ಭೇಟಿ ಸಾಧ್ಯವಿಲ್ಲ" ಎಂದು ಹೇಳಿದ್ದರು ಮುಖ್ಯಮಂತ್ರಿಗಳ ಈ ನಿಲುವಿನಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ ಎಂದು ಸಿಎಂ ಸಲಹೆಗಾರ ರವೀನ್ ತುಕ್ರಾಲ್ ಹೇಳಿದ್ದಾರೆ.
ತಮ್ಮ ನಿಲುವನ್ನು ಎಐಸಿಸಿಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರಿಗೂ ಅಮರಿಂದರ್ ಸಿಂಗ್ ವಿವರಿಸಿದ್ದು, ಕ್ಷಮೆ ಕೋರುವವರೆಗೂ ಸಿಧು ಅವರನ್ನು ಭೇಟಿ ಮಾಡುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇನ್ನು ಸಿಧು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಗ್ಗೆ ಸಿಎಂ ಅಮರಿಂದರ್ ಸಿಂಗ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿಧು
ಅಮರಿಂದರ್
ಸಿಂಗ್
ನಡುವೆ
ಭಿನ್ನಾಭಿಪ್ರಾಯದ
ಹೊರತಾಗಿಯೂ
ಕಾಂಗ್ರೆಸ್
ಹೈಕಮಾಂಡ್
ಸಿಧು
ಅವರನ್ನು
ಕಾಂಗ್ರೆಸ್
ನ
ರಾಜ್ಯಾಧ್ಯಕ್ಷರನ್ನಾಗಿ
ನೇಮಕ
ಮಾಡಿತ್ತು.
ಈ
ಸಮಸ್ಯೆಯನ್ನು
ಬಗೆಹರಿಸುವವರೆಗೂ
ಸಿಧು
ಜತೆ
ಭೇಟಿಯಿಲ್ಲ
ಎಂದು
ಕಾಂಗ್ರೆಸ್ನ
ಹಿರಿಯ
ನಾಯಕ
ಬ್ರಹ್ಮ
ಮಹೀಂದ್ರಾ
ತಳಿಸಿದ್ದರು.
ಸಿಎಂ
ಅವರನ್ನು
ಭೇಟಿಯಾಗಿ
ಸಮಸ್ಯೆ
ಬಗೆಹರಿಸುವವರೆಗೂ
ನಾನು
ಸಿಧು
ಅವರನ್ನು
ಭೇಟಿಯಾಗುವುದಿಲ್ಲ
ಎಂದು
ಹೇಳಿದ್ದರು.
ನೂತನ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರ ಬಗ್ಗೆ ವರದಿಗಳು ಪ್ರಕಟವಾಗಿದ್ದವು.
Recommended Video
ಕಳೆದ ವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಭೇಟಿ ವೇಳೆಯಲ್ಲೂ ಮುಖ್ಯಮಂತ್ರಿ ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂಬುದು ತಿಳಿದುಬಂದಿದೆ., ಅಲ್ಲದೆ ಸಿಧು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.