ಸಿಧು ಮೂಸೆವಾಲಾ ಪ್ರಕರಣ: 58 ಬಾರಿ ಸ್ಥಳ ಬದಲಾಯಿಸಿದ್ದ ಶೂಟರ್ಗಳು
ಚಂಡಿಗಢ ಜೂನ್ 30: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ನಂತರ ಶಾರ್ಪ್ ಶೂಟರ್ಗಳು 58 ಬಾರಿ ತಮ್ಮ ಅಡಗುತಾಣಗಳನ್ನು ಬದಲಾಯಿಸಿರುವುದು ತನಿಖೆಯಿಂದ ಬಯಲಾಗಿದೆ. ಈ ಪ್ರಕರಣದ ಆರೋಪಿಯಾದ ಪ್ರಿಯವ್ರತ್ ಫೌಜಿ ಮತ್ತು ಕುಲದೀಪ್ ಅಲಿಯಾಸ್ ಕಾಶಿಶ್ ಅವರನ್ನು ಜೂನ್ 20 ರಂದು ಗುಜರಾತ್ನಲ್ಲಿ ಬಂಧಿಸಲಾಯಿತು. ಈ ಆರೋಪಿಯ ವಿಚಾರಣೆ ವೇಳೆ ಶಾರ್ಪ್ ಶೂಟರ್ಗಳು 58 ಬಾರಿ ತಮ್ಮ ಅಡಗುತಾಣಗಳನ್ನು ಬದಲಾಯಿಸಿರುವುದು ತಿಳಿದು ಬಂದಿದೆ ಎಂದು ದೆಹಲಿ ಪೊಲೀಸ್ ವಿಶೇಷ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಕಸ್ಟಡಿಯಲ್ ವಿಚಾರಣೆಯ ಸಮಯದಲ್ಲಿ ಆರೋಪಿ ಫೌಜಿ ಮತ್ತು ಕಾಶಿಶ್ ಪೊಲೀಸರಿಗೆ ಕೆಲ ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಹತ್ಯೆ ಬಳಿಕ ಇವರು ಸಾರ್ವಜನಿಕ ಸಾರಿಗೆ ಅಥವಾ ಕಾರನ್ನು ಬಳಸದೇ ಮುಂಡ್ರಾ ಬಂದರಿಗೆ ತೆರಳಿದ್ದರು. ಅಲ್ಲಿ ದೆಹಲಿ ಪೊಲೀಸರು ಬರೋಯ್ನಲ್ಲಿರುವ ಖರಿ-ಮಿಥಿ ರಸ್ತೆಯಿಂದ ಇವರನ್ನು ಬಂಧಿಸಿದರು. ಮೂಸೆವಾಲಾ ಕೊಲೆ ಬಳಿಕ ಹಂತಕರು ತಪ್ಪಿಸಿಕೊಳ್ಳಲು ಮಾಡುತ್ತಿದ್ದ ಪ್ಲ್ಯಾನ್ಗಳು ಪೊಲೀಸರನ್ನು ಅಚ್ಚರಿಗೊಳಿಸಿವೆ.
ಹಂತಕರ ಎತ್ತಿನ ಗಾಡಿ ಪ್ರಯಾಣ
ಹತ್ಯೆಯ ಬಳಿಕ ಅವರನ್ನು ಬಂಧಿಸುವ ಆತಂಕದಿಂದ ಹಂತಕರು ಪರಾರಿಗಾಗಿ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಟ್ರಕ್ಗಳು, ಬೈಸಿಕಲ್ಗಳು ಮತ್ತು ಮೋಟಾರ್ಸೈಕಲ್ಗಳನ್ನು ಬಳಸುತ್ತಿದ್ದರು. ಮಾತ್ರವಲ್ಲದೆ ಗುಜರಾತಿನ ಕೆಲವು ಭಾಗಗಳಿಗೆ ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸಿದ್ದಾರೆ. ಪೊಲೀಸರಿಂದ ಕಣ್ಮರೆಯಾಗಲು ಅವರು ಪ್ರತಿದಿನ ತಮ್ಮ ಗೆಟಪ್ ಅನ್ನು ಬದಲಾಯಿಸುತ್ತಿದ್ದರು ಎಂದು ವಿಶೇಷ ಸೆಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ಹಂತಕರು ಕೊಳೆಗೇರಿಗಳಲ್ಲಿ ಅಥವಾ ಅಗ್ಗದ ಹೋಟೆಲ್ಗಳಲ್ಲಿ ಉಳಿಯಲು ಆದ್ಯತೆ ನೀಡುತ್ತಿದ್ದರು. ಮಾತ್ರವಲ್ಲದೆ ತಮ್ಮ ಗುರುತನ್ನು ಮರೆಮಾಡಲು ರೆಸ್ಟೋರೆಂಟ್ಗಳಲ್ಲಿ ಟ್ರಕ್ ಕ್ಲೀನರ್ಗಳಾಗಿ ಕೆಲಸ ಮಾಡುತ್ತಿದ್ದರು ಎಂದೂ ತಿಳಿದು ಬಂದಿದೆ.
ಬಳಿಕ ಹಂತಕರು ಮಾಡಿದ್ದೇನು?
ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಮೂಸೆವಾಲಾ ಅವರು ತಮ್ಮ ಇಬ್ಬರು ಸಹಚರರೊಂದಿಗೆ ತಮ್ಮ ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು.
ಹತ್ಯೆ ಬಳಿಕ ಹಂತಕರು ಬಿಗ್ ಎಸ್ಕೇಪ್ ಪ್ಲ್ಯಾನ್ ಅನ್ನು ಮಾಡಿದ್ದಾರೆ. ಆಗಾಗ ಸ್ಥಳಗಳನ್ನು ಬದಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. 'ಘಟನೆಯಾದ ಸ್ಥಳದಿಂದ ಸುಮಾರು 175 ಕಿಮೀ ದೂರದಲ್ಲಿರುವ ನಿರ್ಜನ ಕ್ಷೇತ್ರಗಳಲ್ಲಿ ಅವರಿಗೆ ಪ್ರತ್ಯೇಕವಾಗಿ ಸಣ್ಣ ಗುಡಿಸಲುಗಳನ್ನು ಒದಗಿಸಲಾಗಿದೆ. ಹತ್ಯೆಗೂ ಒಂಬತ್ತು ದಿನಗಳ ಮುಂಚೆ ಆರೋಪಿಗಳು ಇಲ್ಲಿ ನೆಲೆಯೂರಿದ್ದಾರೆ. ಇವರಿಗೆ ವಸತಿ ವ್ಯವಸ್ಥೆ ಮಾಡಿರುವ ಜನರ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಮೂಲಗಳು ತಿಳಿಸಿವೆ.
58 ಬಾರಿ ತಮ್ಮ ಸ್ಥಳ ಬದಲಾವಣೆ
ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ಘಟನೆಗೆ ಕೇವಲ ಒಂದು ಗಂಟೆ ಮೊದಲು ಅಪರಾಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ಇಬ್ಬರು ಶೂಟರ್ಗಳಾದ ಮನ್ಪ್ರೀತ್ ಮನ್ನು ಮತ್ತು ಜಗ್ರೂಪ್ ರೂಪ ಪಂಜಾಬ್ನ ಗ್ರಾಮೀಣ ಪ್ರದೇಶಗಳಲ್ಲಿ ಅಡಗಿಕೊಳ್ಳಲು ಆದ್ಯತೆ ನೀಡಿದರೆ, ಇತರ ನಾಲ್ವರು - ಫೌಜಿ, ಕಾಶಿಶ್, ಅಂಕಿತ್ ಸಿರ್ಸಾ ಮತ್ತು ದೀಪಕ್ - ಮಾನ್ಸಾದಿಂದ ತಪ್ಪಿಸಿಕೊಳ್ಳುವ ಪಂಜಾಬ್ನಿಂದ ಗುಜರಾತ್ನ ಮುಂದ್ರಾಗೆ ಪ್ರಯಾಣದ ನಡುವೆ 58 ಬಾರಿ ತಮ್ಮ ಸ್ಥಳಗಳನ್ನು ಬದಲಾಯಿಸಿದರು ಎಂದು ತಿಳಿದು ಬಂದಿದೆ.
ಶಸ್ತ್ರಾಸ್ತ್ರ ಮತ್ತು ವಾಹನಗಳ ಪೂರೈಕೆದಾರರು, ಸ್ವೀಕರಿಸುವವರು ಮತ್ತು ಬ್ಯಾಕಪ್ ಸಂಚುಕೋರರೊಂದಿಗಿನ ಸಂವಹನವು ಎಷ್ಟು ವಿವೇಚನೆಯಿಂದ ಕೂಡಿತ್ತು ಅಂದರೆ ಕೊಲೆಗಾರನಿಗೆ ಇತರರ ಬಗ್ಗೆ ತಿಳಿದಿರಲಿಲ್ಲ. ಪ್ರತಿಯೊಬ್ಬರೂ ಕೆನಡಾ ಮೂಲದ ಗೋಲ್ಡಿ ಬ್ರಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು, ಅವರು ಇಂಟರ್ನೆಟ್ ಫೋನ್ಗಳ ಮೂಲಕ ಪ್ರತಿಯೊಬ್ಬರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು.
ಪರಾರಿಗೆ ಕಾರು ಕಳ್ಳತನ
ಘಟನೆಯ ನಂತರ, ಶೂಟರ್ಗಳಿಗಾಗಿ ಬ್ಯಾಕಪ್ ವಾಹನಗಳು ಸಿದ್ಧವಾಗಿದ್ದವು. ಕೊರೊಲ್ಲಾ ಮಧ್ಯದಲ್ಲಿ ರೂಪ ಮತ್ತು ಮನ್ನು ತಪ್ಪಿಸಿಕೊಳ್ಳಲು ಆಲ್ಟೋ ಕಾರನ್ನು ಲೂಟಿ ಮಾಡಿದ್ದಾರೆ. ಹರಿಯಾಣದ ಫತೇಹಾಬಾದ್ ತಲುಪಿದ ನಂತರ, ಅವರು ಕಾರು ಮತ್ತು ಬಸ್ಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಪ್ರಾರಂಭಿಸಿದರು. ಮುಂದೆ ಬಿಗಿಯಾದ ಭದ್ರತೆಯನ್ನು ನಿರೀಕ್ಷಿಯಿಂದಾಗಿ, ಅವರು ಟ್ರಕ್ಗಳು, ಪಿಕ್-ಅಪ್ ವ್ಯಾನ್ಗಳು ಮತ್ತು ಟ್ರಾಕ್ಟರ್ಗಳಂತಹ ಕಡಿಮೆ ಗಮನಾರ್ಹ ವಾಹನಗಳಲ್ಲಿ ಪ್ರಯಾಣಿಸಲು ಪ್ರಾರಂಭಿಸಿದರು. ಅವರು ಗುಜರಾತ್ನಲ್ಲಿ ಸ್ವಲ್ಪ ದೂರದವರೆಗೆ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿದ್ದಾರೆ ಎಂದು ಅವರು ನಮ್ಮ ಮುಂದೆ ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
'ಗುಜರಾತ್ನಲ್ಲಿರುವ ತಮ್ಮ ಸಹಚರರ ಸಹಾಯದಿಂದ ನಕಲಿ ಆಧಾರ್ ಕಾರ್ಡ್ಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಬಂಧನದ ತಂಡದಲ್ಲಿದ್ದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. "ಖೋಟಾ ಗುರುತಿನ ಚೀಟಿಗಳ ಆಧಾರದ ಮೇಲೆ, ಅವರು ಗುಜರಾತ್ನ ಕಚ್ನ ಕಡಿಮೆ ಜನಸಂದಣಿಯ ಪ್ರದೇಶಗಳಲ್ಲಿ ಅಗ್ಗದ ಹೋಟೆಲ್ಗಳಲ್ಲಿ ತಂಗುತ್ತಿದ್ದರು. ಆದಾಗ್ಯೂ, ಅವರು ಒಂದೇ ಹೋಟೆಲ್ನಲ್ಲಿ ಸತತ ಎರಡು ರಾತ್ರಿಗಳನ್ನು ತಂಗಿಲ್ಲ. ಕೆಲವೊಮ್ಮೆ, ಪೊಲೀಸರ ದಾಳಿಗೆ ಹೆದರಿ, ಅವರು ತಮ್ಮ ಹೋಟೆಲ್ಗಳನ್ನು ದಿನಕ್ಕೆ ಮೂರು ಬಾರಿ ಬದಲಾಯಿಸಿದ್ದಾರೆ' ಎಂದು ಅವರು ಹೇಳಿದರು.
ಆರೋಪಿಗಳ ಪತ್ತೆಗೆ ಪೊಲೀಸರ ಬಲೆ
ಹತ್ಯೆಯಲ್ಲಿ ಭಾಗಿಯಾಗಿರುವ ಆರು ಶೂಟರ್ಗಳ ಪೈಕಿ ಅಂಕಿತ್ ಸಿರ್ಸಾ, ದೀಪಕ್, ಜಗ್ರೂಪ್ ರೂಪ ಮತ್ತು ಮನ್ಪ್ರೀತ್ ಮನ್ನು ಎಂಬ ನಾಲ್ವರು ಕ್ರಿಮಿನಲ್ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ವಿಶೇಷ ಪೊಲೀಸ್ ಕಮಿಷನರ್ (ವಿಶೇಷ ಸೆಲ್) ಎಚ್ಜಿಎಸ್ ಧಲಿವಾಲ್ ಹೇಳಿದ್ದಾರೆ. "ಮೂಸೆವಾಲಾ ಅವರ ವಾಹನವನ್ನು ಹಿಂಬದಿಯಿಂದ ಅಡ್ಡಗಟ್ಟಿದ ಬೊಲೆರೋದಲ್ಲಿ ಸಿರ್ಸಾ ಮತ್ತು ದೀಪಕ್ ಫೌಜಿ ಮತ್ತು ಕಾಶಿಶ್ ಅವರೊಂದಿಗೆ ಹೋಗುತ್ತಿದ್ದಾಗ, ರೂಪ ಮತ್ತು ಮನ್ನು ಟೊಯೋಟಾ ಕರೋಲಾದಲ್ಲಿ ಗಾಯಕನ ವಾಹನಗಳನ್ನು ಮುಂಭಾಗದಿಂದ ದಾಳಿ ಮಾಡಿದರು" ಎಂದು ಧಲಿವಾಲ್ ಕಳೆದ ವಾರ HT ಗೆ ತಿಳಿಸಿದರು.
"ಬಂಧಿತ ಶೂಟರ್ಗಳ ಬಂಧನಕ್ಕೆ ಎರಡು-ಮೂರು ದಿನಗಳ ಮೊದಲು ಸಿರ್ಸಾ ಮತ್ತು ದೀಪಕ್ ಅವರ ಕೆಲವು ಸಂಭವನೀಯ ಸ್ಥಳಗಳನ್ನು ನಾವು ಪಡೆದುಕೊಂಡಿದ್ದೇವೆ. ಅಪರಾಧದ ಸ್ಥಳದಿಂದ ಬಹಳ ದೂರದಲ್ಲಿರುವ ಕಾರಣ ಇನ್ಪುಟ್ಗಳು ತಡವಾಗಿ ಬಂದವು..." ಎಂದು ಅವರು ತಿಳಿಸಿದ್ದಾರೆ.