ಕೊರೊನಾ ಭೀತಿಯಲ್ಲೂ ಶಾಲೆ ಪುನರಾರಂಭಕ್ಕೆ ಮುಂದಾದ ಆ ರಾಜ್ಯ
ಚಂಡೀಗಡ, ಜುಲೈ 1: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಜುಲೈ 31ರವರೆಗೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಅನ್ಲಾಕ್2 ಮಾರ್ಗಸೂಚಿ ಹೊರಡಿಸಿದೆ. ಕೇಂದ್ರದ ಆದೇಶದಂತೆ ಜುಲೈ 31ರವರೆಗೂ ಶಾಲೆ-ಕಾಲೇಜು ತೆರೆಯುವಂತಿಲ್ಲ.
Recommended Video
ಆದರೆ, ಹರ್ಯಾಣ ಸರ್ಕಾರವೂ ಶಾಲೆಗಳನ್ನು ಪುನರಾರಂಭಿಸಲು ಸಜ್ಜಾಗಿದೆ. ಬೇಸಿಗೆ ರಜೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲಿದೆ ಎಂದು ಶಿಕ್ಷಣ ಇಲಾಖೆ ಬುಧವಾರ ಸೂಚಿಸಿದೆ.
ಆನ್ಲೈನ್ ಕ್ಲಾಸ್ಗೆ ಕರ್ನಾಟಕದ ಒಪ್ಪಿಗೆ; ತರಗತಿಗಳ ವಿವರ
ಜುಲೈ 1 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿರುವ ಸರ್ಕಾರ ಜುಲೈ 26ಕ್ಕೆ ಸಮ್ಮರ್ ಹಾಲಿಡೇ ಮುಗಿಯಲಿದೆ. ಜುಲೈ 27 ರಿಂದ ಎಂದಿನಂತೆ ಶಾಲೆಗಳು ಆರಂಭವಾಗಲಿದೆ ಎಂದು ಅಧಿಸೂಚನೆ ಹೊರಡಿಸಿದೆ.
Schools to reopen from July 27 in Haryana after summer vacations end on July 26: Haryana Directorate School Education pic.twitter.com/2TiJxW0wi7
— ANI (@ANI) July 1, 2020
ಪ್ರಸ್ತುತ ದೇಶದಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಜುಲೈ ತಿಂಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ ಕೇಂದ್ರ ಸರ್ಕಾರವೂ ತಜ್ಞರ ವರದಿ ಹಾಗೂ ಕೊರೊನಾ ವಿರುದ್ಧ ಹೋರಾಟದ ಮುನ್ನೆಚ್ಚರಿಕೆಯಿಂದಾಗಿ ಶಾಲೆ-ಕಾಲೇಜು ತೆರೆಯವುದರ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಷ್ಟರೊಳಗೆ ಹರ್ಯಾಣ ಸರ್ಕಾರ ಶಾಲೆ ಪುನರಾರಂಭಿಸುವ ಬಗ್ಗೆ ನಿರ್ಧರಿಸಿರುವುದು ಅಚ್ಚರಿ ತಂದಿದೆ.
ಇದುವರೆಗೂ ಬೇರೆ ಯಾವ ರಾಜ್ಯಗಳು ಶಾಲೆ ಮತ್ತು ಕಾಲೇಜು ಆರಂಭಿಸುವ ಬಗ್ಗೆ ದಿನಾಂಕ ಪ್ರಕಟಿಸಿಲ್ಲ.