ಮಾತುಕತೆ ವಿಫಲಗೊಂಡರೆ ಹರಿಯಾಣದ ಮಾಲ್ಗಳು, ಪೆಟ್ರೋಲ್ ಪಂಪ್ ಮುಚ್ಚುತ್ತೇವೆ: ರೈತ ಸಂಘಟನೆ
ಚಂಡೀಗಡ, ಜನವರಿ 01: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಕಾನೂನು ಖಾತರಿ ನೀಡಬೇಕು ಎಂಬ ಬೇಡಿಕೆ ಪರಿಹರಿಸಿದಿದ್ದರೆ ದೃಢವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ಹರಿಯಾಣದ ರೈತ ಸಂಘಟನೆ ಶುಕ್ರವಾರ ಎಚ್ಚರಿಕೆ ನೀಡಿದೆ.
ಸಿಂಘು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು ಜನವರಿ 4 ರಂದು ಸರ್ಕಾರದೊಂದಿಗಿನ ಸಭೆಯು ವಿಫಲವಾದರೆ, ನಾವು ಹರಿಯಾಣದ ಎಲ್ಲಾ ಮಾಲ್ಗಳು, ಪೆಟ್ರೋಲ್ ಪಂಪ್ಗಳನ್ನು ಮುಚ್ಚುವ ದಿನಾಂಕಗಳನ್ನು ಪ್ರಕಟಿಸುತ್ತೇವೆ ಎಂದು ರೈತ ಸಂಘಟನೆಗಳು ಶುಕ್ರವಾರ ಎಚ್ಚರಿಸಿವೆ.
ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ; ಕೃಷಿ ಸಚಿವ
''ಸರ್ಕಾರ ರೈತರನ್ನು ಲಘುವಾಗಿ ಪರಿಗಣಿಸುತ್ತಿದೆ ಎಂದು ತೋರುತ್ತದೆ. ಶಹೀನ್ ಬಾಗ್ನ ಪ್ರತಿಭಟನಾಕಾರರನ್ನು ತೆಗೆದುಹಾಕಲು ಸರ್ಕಾರಕ್ಕೆ ಸಾಧ್ಯವಾಯಿತು ಮತ್ತು ಅವರು ನಮ್ಮೊಂದಿಗೆ ಅದೇ ರೀತಿ ಮಾಡುವ ಬಗ್ಗೆ ಯೋಚಿಸುತ್ತಿರಬಹುದು, ಆದರೆ ಅಂತಹ ಯಾವುದೇ ದಿನ ಬರುವುದಿಲ್ಲ. ಜನವರಿ 4 ರಂದು ಸರ್ಕಾರದೊಂದಿಗೆ ನಡೆದ ಸಭೆಯಲ್ಲಿ ಯಾವುದೇ ಪರಿಹಾರ ದೊರೆಯದಿದ್ದರೆ, ಖಾಸಗಿ ಪೆಟ್ರೋಲ್ ಪಂಪ್ಗಳನ್ನು ಹೊರತುಪಡಿಸಿ ಎಲ್ಲಾ ಪೆಟ್ರೋಲ್ ಪಂಪ್ಗಳು ಮತ್ತು ಮಾಲ್ಗಳನ್ನು ಮುಚ್ಚಲಾಗುವುದು'' ಎಂದು ಹರಿಯಾಣ ರೈತ ಮುಖಂಡ ವಿಕಾಸ್ ಹೇಳಿದ್ದಾರೆ.
In Haryana, all toll plazas will remain free. All the petrol pumps & malls, except private, will be shut. Leaders of BJP & Jannayak Janata Party (JJP) will face protests in the state & this will continue till their govt of alliance breaks: Vikas Sisar, Haryana farmer leader pic.twitter.com/gFKPO63aKk
— ANI (@ANI) January 1, 2021
ಆದಾಗ್ಯೂ, ಹರಿಯಾಣದಲ್ಲಿನ ಎಲ್ಲಾ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಬಿಜೆಪಿ ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದ್ದು, ಅವರ ಮೈತ್ರಿ ಮುರಿಯುವವರೆಗೂ ಇದು ಮುಂದುವರಿಯಲಿದೆ ಎಂದಿದ್ದಾರೆ.
ಇದರ ಜೊತೆಗೆ ಹರಿಯಾಣ-ರಾಜಸ್ಥಾನ ಗಡಿಯಲ್ಲಿರುವ ಶಹಜಹಾನ್ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯತ್ತ ಸಾಗಲಿದ್ದಾರೆ ಎಂದು ಸ್ವರಾಜ್ ಭಾರತದ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ. ಮುಂದಿನ ಸುತ್ತಿನ ಮಾತುಕತೆಯಲ್ಲಿ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದಿದ್ದರೆ ಜನವರಿ 6 ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ಮತ್ತೊಬ್ಬ ನಾಯಕ ಯುಧ್ವೀರ್ ಸಿಂಗ್ ಹೇಳಿದ್ದಾರೆ.