ಭ್ರಷ್ಟಾಚಾರ ಪ್ರಕರಣ: 'ನನ್ನ ಮುಂದೆ ಮಗನನ್ನು ಕೊಲ್ಲಲಾಯಿತು'- ಸಂಜಯ್ ಪೊಪ್ಲಿ
ಚಂಡೀಗಢ, ಜೂನ್ 26: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಅಧಿಕಾರಿ ಸಂಜಯ್ ಪೊಪ್ಲಿ ಅವರ ಪುತ್ರ ಇಂದು ಚಂಡೀಗಢದಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. 27 ವರ್ಷದ ಕಾರ್ತಿಕ್ ಪೊಪ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದರೆ, ಅವನ ತಂದೆ ಅವನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
"ನನ್ನ ಕಣ್ಣೆದುರೇ ನನ್ನ ಮಗನನ್ನು ಕೊಲ್ಲಲಾಯಿತು. ನನ್ನ ಮಗನ ಸಾವಿಗೆ ನಾನೇ ಪ್ರತ್ಯಕ್ಷ ಸಾಕ್ಷಿ" ಎಂದು ಸಂಜಯ್ ಪೊಪ್ಲಿ ಹೇಳಿದ್ದಾರೆ. ಅಧಿಕಾರಿಗಳು ತಮ್ಮ ಮಗನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ವಿರುದ್ಧದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಜಿಲೆನ್ಸ್ ಬ್ಯೂರೋ ತಂಡದ ಸಂಜಯ್ ಪೊಪ್ಲಿ ಮನೆಗೆ ಬಂದಿತ್ತು ಮತ್ತು ಘಟನೆ ನಡೆದಾಗ ತಂಡ ಅಲ್ಲಿಯೇ ಇದ್ದರು ಎಂದು ನೆರೆಯವರು ಸುದ್ದಿಗಾರರಿಗೆ ತಿಳಿಸಿದರು.
"ವಿಜಿಲೆನ್ಸ್ ತಂಡವು ಸಂಜಯ್ ಪೊಪ್ಲಿ ಅವರ ನಿವಾಸದಲ್ಲಿತ್ತು ಮತ್ತು ಅವರ ಮಗ ಕಾರ್ತಿಕ್ ಪೊಪ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಚಾಹಲ್ ಹೇಳಿದ್ದಾರೆ. 27 ವರ್ಷದ ಯುವಕ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಚಹಾಲ್ ಆರೋಪಿಸಿದ್ದಾರೆ.
Vigilance team asked Sanjay Popli to sign on something lest it won't be good for his son. They locked him in room & took his son upstairs. We were standing downstairs & after sometime we heard sound of gun. Vigilance people murdered him: Anu Preet Kular, Sanjay Popli's relative pic.twitter.com/KRicdYqXWl
— ANI (@ANI) June 25, 2022
ಜೂನ್ 20 ರಂದು ಪಂಜಾಬ್ನ ನವನ್ಶಹರ್ನಲ್ಲಿ ಒಳಚರಂಡಿ ಪೈಪ್ಲೈನ್ ಹಾಕುವ ಟೆಂಡರ್ಗಳನ್ನು ತೆರವುಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಗಿತ್ತು. ವಿಜಿಲೆನ್ಸ್ ತಂಡ ಇಂದು ಬಂಧಿತ ಅಧಿಕಾರಿಯ ಮನೆಗೆ ದಾಳಿ ನಡೆಸಿದ್ದು, ಈ ವೇಳೆ ಅವರ ಬಳಿ ಹಲವಾರು ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ನಗದು, ಮೊಬೈಲ್ ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ತಮ್ಮ ಪ್ರಕರಣವನ್ನು ಬೆಂಬಲಿಸುವ ಸುಳ್ಳು ಹೇಳಿಕೆಗಳನ್ನು ನೀಡುವಂತೆ ವಿಜಿಲೆನ್ಸ್ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಬಂಧಿತ ಅಧಿಕಾರಿಯ ಪತ್ನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
#WATCH | I am an eye-witness, they (police officials) are taking me....my son was shot by them...: IAS officer Sanjay Popli https://t.co/5GgDWrlxED pic.twitter.com/SsIj4ov9q4
— ANI (@ANI) June 25, 2022
"ವಿಜಿಲೆನ್ಸ್ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು ಮತ್ತು ಅವರು ದಾಖಲಿಸಿದ ಪ್ರಕರಣಕ್ಕೆ ಬೆಂಬಲವಾಗಿ ಸುಳ್ಳು ಹೇಳಿಕೆಗಳನ್ನು ನೀಡುವಂತೆ ನನ್ನ ಮನೆಯ ಕೆಲಸದಾಕೆಯನ್ನು ಸಹ ಚಿತ್ರಹಿಂಸೆ ನೀಡುತ್ತಿದ್ದರು. ನನ್ನ 27 ವರ್ಷದ ಮಗ ಸಾವನ್ನಪ್ಪಿದ್ದಾನೆ. ಅವನು ಅದ್ಭುತ ವಕೀಲನಾಗಿದ್ದನು. ಅವರು ಅವನನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ. "ಸುಳ್ಳು ಕೇಸ್ ಕಟ್ಟಲು, ಅವರು ನನ್ನ ಮಗನನ್ನು ಕಿತ್ತುಕೊಂಡರು'' ಕಾರ್ತಿಕ್ ಪೋಪ್ಲಿ ಹೋಗಿದ್ದಾರೆ ಎಂದು ಸಂಜಯ್ ಪೋಪ್ಲಿ ಅವರ ಪತ್ನಿ ತಮ್ಮ ಕೈಗಳ ಮೇಲೆ ರಕ್ತದ ಕಲೆಗಳನ್ನು ತೋರಿಸಿದ್ದಾರೆ.