ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರಿಗೆ 10 ಲಕ್ಷ ರೂಪಾಯಿ ವಿಮೆ ಘೋಷಿಸಿದ ಸರ್ಕಾರ

|
Google Oneindia Kannada News

ಚಂಡೀಘರ್, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತು ಭಾರತ ಲಾಕ್ ಡೌನ್ ನಿಯಮಗಳನ್ನು ಪಾಲಿಸುವಂತೆ ದೇಶಾದ್ಯಂತ ಸಾರ್ವಜನಿಕವಾಗಿ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವಂತಾ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ.

Recommended Video

ಮುಂದೆ ಬರಲಿದೆ ಒಳ್ಳೆಯ ದಿನ,ಹೊರ ರಾಜ್ಯದ ಕನ್ನಡಿಗರಿಗೆ ಅಭಯ ನೀಡಿದ ಶಾಸಕ

ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ಪತ್ರಕರ್ತರು ಕೂಡಾ ಹಗಲಿರುಳು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಮನಗಂಡ ಹರಿಯಾಣ ಸರ್ಕಾರವು ಪ್ರತಿಯೊಬ್ಬ ಪತ್ರಕರ್ತರಿಗೆ 10 ಲಕ್ಷ ರೂಪಾಯಿ ವಿಮೆಯನ್ನು ಘೋಷಿಸಿದೆ.

ಕೇಂದ್ರದಿಂದ ದೂರವಾಣಿ ಮೂಲಕ ಕೊರೊನಾ ಸಮೀಕ್ಷೆ: ಹೇಗಿರಲಿದೆ? ಕೇಂದ್ರದಿಂದ ದೂರವಾಣಿ ಮೂಲಕ ಕೊರೊನಾ ಸಮೀಕ್ಷೆ: ಹೇಗಿರಲಿದೆ?

ಭಾರತ ಲಾಕ್ ಡೌನ್ ಮಧ್ಯೆಯೂ ಕೊರೊನಾ ವೈರಸ್ ಕುರಿತು ಸುದ್ದಿಗಳನ್ನು ಮಾಡುವುದಕ್ಕಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ವಿಮೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

CM Manohar Lal Khatter Government Announce 10 Lakh Insurance Cover For Journalist

ಮುಂಬೈ-ಚೆನ್ನೈನಲ್ಲಿ ಪತ್ರಕರ್ತರಿಗೆ ಕೊರೊನಾ ಸೋಂಕು:

ಮಹಾರಾಷ್ಟ್ರದ ಮುಂಬೈ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಕೊರೊನಾ ವೈರಸ್ ಹರಡುವಿಕೆ ಮತ್ತು ಸೋಂಕಿತರ ಬಗ್ಗೆ ವರದಿಗೆ ತೆರಳಿದ ಹಲವು ಮಂದಿ ಪತ್ರಕರ್ತರಲ್ಲಿಯೇ ಮಾರಕ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಪತ್ರಕರ್ತರಲ್ಲಿ ವಿಶ್ವಾಸ ತುಂಬುವುದರ ಜೊತೆಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕೊರೊನಾ ವೈರಸ್ ಹರಡುವಿಕೆ ಭೀತಿಯ ನಡುವೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಇತ್ತೀಚಿಗಷ್ಟೇ ರಾಜ್ಯದಲ್ಲಿ ಇರುವ ಪತ್ರಕರ್ತರಿಗೆ ನೀಡಿರುವ ವಿಮಾ ಯೋಜನೆಯನ್ನು ವಿಸ್ತರಣೆ ಮಾಡಿದ್ದರು.

English summary
Coronavirus News: CM Manohar Lal Khatter Government Announce 10 Lakh Insurance Cover For Journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X