ಪಂಜಾಬ್: ಅಕ್ರಮ ಮರಳು ಗಣಿಗಾರಿಕೆಯಲ್ಲಿ ಚನ್ನಿ ಪಾಲು: ಅಮರಿಂದರ್ ದೊಡ್ಡ ಆರೋಪ
ಚಂಡೀಗಢ ಜನವರಿ 22: ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮೇಲೆ ಅಮರಿಂದರ್ ದೊಡ್ಡ ಆರೋಪ ಮಾಡಿದ್ದಾರೆ. ಸುಂದರ್ಶನವೊಂದರಲ್ಲಿ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಚರಂಜಿತ್ ಸಿಂಗ್ ಚನ್ನಿ ಮೇಲೆ ಮರಳು ಮಾಫಿಯಾ ಹಾಗೂ ಹಿರಿಯ ಮಹಿಳಾ ಐಎಎಸ್ ಅಧಿಕಾರಿಗೆ ಅಸಭ್ಯ ಸಂದೇಶ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಅಕ್ರಮ ಮರಳು ಮಾಫಿಯಾದಲ್ಲಿ ಸೋನಿಯಾ ಗಾಂಧಿ ಚನ್ನಿ ಅವರಿಗೆ ಸಹಾಯ ಮಾಡಿದ್ದಾರೆಂದು ದೂರಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆಯಲ್ಲಿ ಚನ್ನಿ ಪಾಲು
''ನನ್ನ ಅಧಿಕಾರಾವಧಿಯಲ್ಲಿಯೂ ಅಕ್ರಮ ಮರಳುಗಾರಿಕೆ ಮುನ್ನೆಲೆಗೆ ಬಂದಿತ್ತು. ನಾನು ನನ್ನ ವಿಮಾನದಲ್ಲಿ ಸಟ್ಲೆಜ್ ನದಿಯ ಮೇಲೆ ಹೋಗುತ್ತಿದ್ದೆ, ಆಗ ಕೆಳಗೆ ಗಣಿಗಾರಿಕೆ ನಡೆಯುತ್ತಿರುವುದನ್ನು ನೋಡಿದೆ. ನಂತರ ನಾನು ತನಿಖೆ ನಡೆಸಿದ್ದೇನೆ. ಈ ವೇಳೆ ಅಕ್ರಮ ಮರಳು ದಂಧೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಸೋನಿಯಾ ಗಾಂಧಿ ನನಗೆ ಕೇಳಿದ್ದರು. ಆಗಲೇ ನಾನು ಅವರಿಗೆ ಕೆಳಗಿನಿಂದ ಮೇಲೆ ಎಲ್ಲಾರೂ ಶಾಮೀಲಾಗಿದ್ದಾರೆ ಎಂದು ಹೇಳಿದ್ದೆ. ಆದರೆ ಚರಂಜಿತ್ ಸಿಂಗ್ ಚನ್ನಿ ಮೇಲೆ ಆರೋಪ ಬಂದಾಗ ಸೋನಿಯಾ ಗಾಂಧಿ ಅವರು ವಿರುದ್ಧ ಕ್ರಮಕ್ಕೆ ಬದಲಾಗಿ ಚನ್ನಿಗೆ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ" ಎಂದು ಪಂಜಾಬ್ ಮಾಜಿ ಸಿಎಂ ವಿಷಾದಿಸಿದರು.
"ಈಗ ಸೋನಿಯಾ ಗಾಂಧಿ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಚನ್ನಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅನೇಕ ಹಿರಿಯ ಸಚಿವರೂ ಇದರಲ್ಲಿ ತೊಡಗಿದ್ದಾರೆ. ಪಂಜಾಬ್ನಲ್ಲಿ ಮಾಫಿಯಾ ಪ್ರಾಬಲ್ಯವಿದೆ ಮತ್ತು ಮಂತ್ರಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಈ ಬಗ್ಗೆ ನೀವು (ಪತ್ರಕರ್ತರು) ಚರಣ್ಜಿತ್ ಸಿಂಗ್ ಚನ್ನಿ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು" ಎಂದರು.
'MeToo ದೂರಿನಲ್ಲಿ ನನ್ನ ಕಾಲಿಗೆ ಬಿದ್ದಿದ್ರು ಚರಂಜಿತ್ ಸಿಂಗ್ ಚನ್ನಿ'
ಪಂಜಾಬ್ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮರಿಂದರ್ ಸಿಂಗ್, MeToo ದೂರಿನಲ್ಲಿ ಮಧ್ಯಪ್ರವೇಶಿಸಲು ಚರಂಜಿತ್ ಸಿಂಗ್ ಚನ್ನಿ ಅವರ ಕಾಲಿಗೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. 2018ರ ಅಕ್ಟೋಬರ್ನಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಚನ್ನಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದಾಗ ಈ ವಿವಾದ ಮುನ್ನೆಲೆಗೆ ಬಂದಿತ್ತು. ಹಿರಿಯ ಮಹಿಳಾ ಐಎಎಸ್ ಅಧಿಕಾರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಚನ್ನಿ ಮೇಲೆ ಆರೋಪ ಕೇಳಿ ಬಂದಿತ್ತು. ಆದರೆ ಚನ್ನಿ ವಿರುದ್ಧ ತನಿಖೆಯ ಬದಲು ಹೈಕಮಾಂಡ್ ಅವರು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ ಎಂದು ಅಮರಿಂದರ್ ದೂರಿದ್ದಾರೆ.
.@capt_amarinder regrets helping @CHARANJITCHANNI resolve the #metoo complaint against him. Says, “@CHARANJITCHANNI had fallen on my feet and pledged loyalty to me for life. Now he has changed colours and is claiming he had been trying to dislodge me for the past two years!”. pic.twitter.com/AVbtRdjjRS
— Raveen Thukral (@RT_Media_Capt) January 21, 2022
ತನ್ನ ವಿರುದ್ಧದ ದೂರನ್ನು ತಿಳಿಸುವ ಬದಲು ಪ್ರಸ್ತುತ ಸಿಎಂ ಜೀವನ ಪರ್ಯಂತ ತಮಗೆ ನಿಷ್ಠರಾಗಿರುತ್ತಾರೆಂದು ಕಾಂಗ್ರೆಸ್ ವಾಗ್ದಾನ ಮಾಡಿದೆ. "ಈಗ ಪಕ್ಷ ಬಣ್ಣ ಬದಲಾಯಿಸಿದೆ ಮತ್ತು ಕಳೆದ ಎರಡು ವರ್ಷಗಳಿಂದ ನನ್ನನ್ನು ಹೊರಹಾಕಲು ಪ್ರಯತ್ನಿಸಿದರು" ಎಂದು ಹೇಳಿದ್ದಾರೆ.
ಪಂಜಾಬ್ ಚುನಾವಣೆ
2017 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ 117 ಸದಸ್ಯರ ಸದನದಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಕೇವಲ 54 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರೀ ಜನಾದೇಶವನ್ನು ಗೆದ್ದಿದ್ದರೂ, ಗುರು ಗ್ರಂಥ ಸಾಹಿಬ್ ಮತ್ತು ಮಾದಕವಸ್ತು ಪ್ರಕರಣಗಳ ಅಪವಿತ್ರಗೊಳಿಸಿದ ಘಟನೆಗಳಲ್ಲಿ ವಿಳಂಬವಾದ ನ್ಯಾಯದ ಬಗ್ಗೆ ಸಿಧು ಆಗಿನ ಸಿಎಂ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ಆರಂಭಿಸಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದೆ. ಫೆಬ್ರವರಿ 20 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.