ವ್ಯಕ್ತಿಯ ಕುತ್ತಿಗೆಯ ಭಾಗದಲ್ಲಿ ಸ್ತನ; ವೈದ್ಯಲೋಕಕ್ಕೆ ಅಚ್ಚರಿ
ಮೈಸೂರು, ಫೆಬ್ರವರಿ 06: ವ್ಯಕ್ತಿಯೊಬ್ಬರ ಕುತ್ತಿಗೆಯ ಭಾಗದಲ್ಲಿ ಸ್ತನವೊಂದು ಬೆಳೆದಿದ್ದು, ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಗ್ರಾಮದ ವ್ಯಕ್ತಿಯೊಬ್ಬನ ಕುತ್ತಿಗೆಯಲ್ಲಿ ಈ ಸ್ತನ ಬೆಳೆದಿದೆ. ಈ ವ್ಯಕ್ತಿಯನ್ನು ಟಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧು
ವ್ಯಕ್ತಿಗೆ ಚಿಕ್ಕಂದಿನಿಂದಲೇ ಕತ್ತಿನ ಭಾಗದಲ್ಲಿ ಸಣ್ಣದಾದ ಸ್ತನವಿತ್ತು. ಆದರೆ ಅಷ್ಟು ನೋವು ಕಾಣಿಸಿಕೊಂಡಿರಲಿಲ್ಲವಂತೆ. ಹೀಗಾಗಿ ಸಂಕೋಚದಿಂದ ಇದನ್ನ ವೈದ್ಯರಿಗೆ ತೋರಿಸಿರಲಿಲ್ಲ. ಅದಕ್ಕೆ ಚಿಕಿತ್ಸೆಯನ್ನೂ ಪಡೆದಿರಲಿಲ್ಲ.
ಆದರೆ ಈಗ ಇದು ದೊಡ್ಡದಾದ ಕಾರಣ ಬುಧವಾರ ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸಿದ್ದ, ಈ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ ಸ್ತನವನ್ನು ತೆರವುಗೊಳಿಸಲಾಗಿದೆ. ಇದು ಕ್ಯಾನ್ಸರ್ ಗಡ್ಡೆಯಲ್ಲ ಎಂದು ವೈದ್ಯಾಧಿಕಾರಿ ಡಾ. ಗೋವಿಂದ ಶೆಟ್ಟಿ ತಿಳಿಸಿದರು.