ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡ್ಲುಪೇಟೆ: 70 ಜನರ ಪ್ರಾಣ ಉಳಿಸಿದ ಬಸ್ ಚಾಲಕನಿಗೆ ಬಂಗಾರದ ಪದಕ

|
Google Oneindia Kannada News

Recommended Video

ಬಸ್ ಡ್ರೈವರ್ ಚಿನ್ನಸ್ವಾಮಿಗೆ 70 ಪ್ರಯಾಣಿಕರನ್ನ ಕಾಪಾಡಿದ್ದಕ್ಕೆ ಸಿಕ್ಕಿದ್ದು ಚಿನ್ನದ ಪದಕ | Oneindia Kannada

ಚಾಮರಾಜನಗರ, ಡಿಸೆಂಬರ್ 14 : ಸಮಯ ಪ್ರಜ್ಞೆಯಿಂದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿ ಅವರಿಗೆ ಚಿನ್ನದ ಪದಕ ಸಿಕ್ಕಿದೆ.

ಗುಂಡ್ಲುಪೇಟೆ: ಸಮಯಪ್ರಜ್ಞೆಯಿಂದ 70 ಮಂದಿ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕಗುಂಡ್ಲುಪೇಟೆ: ಸಮಯಪ್ರಜ್ಞೆಯಿಂದ 70 ಮಂದಿ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕ

ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಅಕ್ಟೋಬರ್ 8 ರಂದು ಬ್ರೇಕ್ ಫೇಲ್ ಆಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ನ್ನು ಕಂಟ್ರೋಲ್ ಮಾಡಿ ಅದರಲ್ಲಿದ್ದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದಕ್ಕಾಗಿ ಚಾಲಕ ಚಿನ್ನಸ್ವಾಮಿ ಅವರಿಗೆ ಕೆಎಸ್ ಆರ್ ಟಿಸಿ ಇಲಾಖೆ ಚಿನ್ನದ ಪದಕ ನೀಡಿ ಗೌರವಿಸಿದೆ.

KSRTC bus driver Chinnaswamy got a gold medal for saved 70 passengers life

ಅಕ್ಟೋಬರ್ 8 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಬ್ರೇಕ್ ಪೇಲ್ ಇನ್ನೇನು ಬಸ್ ಕಮರಿಗೆ ಬಿತ್ತು ಎನ್ನುವಷ್ಟರಲ್ಲಿಯೇ ಚಾಲಕ ಚಿನ್ನಸ್ವಾಮಿ ಅವರ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಇದರಲ್ಲಿ ಸುಮಾರು 70 ಜನರು ಪ್ರಯಾಣಿಸುತ್ತಿದ್ದರು.

ಇಲಾಖೆಯ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 15 ವರ್ಷ ಹಾಗೂ ನಗರ ಪ್ರದೇಶದಲ್ಲಿ 5 ವರ್ಷ ಯಾವುದೇ ಅಪಾಯ ಸಂಭವಿಸಿದೆ ಬಸ್ ಚಲಾಯಿಸಿದ್ದವರಿಗೆ ಮಾತ್ರ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಆದರೆ, ಚಿನ್ನಸ್ವಾಮಿ ಅವರು ಕೇವಲ 5 ವರ್ಷ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 70 ಜನರ ಪ್ರಾಣ ಉಳಿಸಿದ್ದರಿಂದ ಅವರ ಸಾಧನೆಯನ್ನು ಗುರುತಿಸಿ ಚಿನ್ನದ ಪದಕ ನೀಡಿ ಗೌರವಿಸಿದೆ. ನಿಜಕ್ಕೂ ಈತನ ಸಾಧನೆಗೆ ಏನೂ ಕೊಟ್ಟರೂ ಕಡಿಮೆನೇ.

English summary
The KSRTC bus driver Chinnaswamy got a gold medal for saved 70 passengers life. Over 70 passengers had near death experience and miraculous escape. as Bus diver Chinnaswamy managed to control a break failur bus by ramming into a protection wall at Himavad Gopalaswamy Betta Gundlupet taluk Chamarajanagar district on October 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X