ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ!

|
Google Oneindia Kannada News

ಚಾಮರಾಜನಗರ, ಜನವರಿ 07: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದೆಡೆ ಬೆಟ್ಟಿಂಗ್ ನಡೆದಿದ್ದರೆ ಮತ್ತೊಂದೆಡೆ ಸ್ವತಃ ಅಭ್ಯರ್ಥಿಗಳೇ ದೇವರಿಗೆ ಹರಕೆ ಹೊತ್ತಿದ್ದರು. ಇದೀಗ ಹರಕೆ ಹೊತ್ತಿದ್ದ ಅಭ್ಯರ್ಥಿಯೊಬ್ಬರು ಹರಕೆ ತೀರಿಸಲು 160 ಕಿ. ಮೀ. ಪಾದಯಾತ್ರೆ ಹೊರಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಪಡೆದ ಸೆಲ್ವಂ ಎಂಬುವರೇ ಹರಕೆ ತೀರಿಸಲು ಮೈಸೂರು ಜಿಲ್ಲೆಯ ಕೆ. ಆರ್. ನಗರದಲ್ಲಿರುವ ಡೋರನಹಳ್ಳಿಯ ಸಂತ ಆಂತೋಣಿ ಚರ್ಚ್‍ಗೆ ಪಾದಯಾತ್ರೆ ಹೊರಟಿದ್ದಾರೆ.

ಜೊತೆಯಾಗಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ ಅತ್ತೆ-ಸೊಸೆ ಜೊತೆಯಾಗಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ ಅತ್ತೆ-ಸೊಸೆ

ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನಾನು ಗೆದ್ದರೆ ಡೋರನಹಳ್ಳಿಯ ಅಂತೋಣಿ ಚರ್ಚ್‍ಗೆ ಪಾದಯಾತ್ರೆಯಲ್ಲಿ ತೆರಳಿ ಹರಕೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದರು. ಅವರು ಈಗ ಚುನಾವಣೆಯಲ್ಲಿ ಗೆಲುವು ಪಡೆದ ಹಿನ್ನಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆ 34 ಗ್ರಾಮ ಪಂಚಾಯತಿ ಆಯ್ಕೆಯಾದವರ ಪಟ್ಟಿ ಧಾರವಾಡ ಜಿಲ್ಲೆ 34 ಗ್ರಾಮ ಪಂಚಾಯತಿ ಆಯ್ಕೆಯಾದವರ ಪಟ್ಟಿ

 Gram Panchayat Election Candidate Padayatra To Church

ಸೆಲ್ವಂ ಅವರು ತಾವು ಸ್ಪರ್ಧಿಸಿದ್ದ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್‍ನಿಂದಲೇ ಸಂತ ಆಂತೋಣಿಯವರಿಗೆ ಹರಕೆ ತೀರಿಸಲು ಸುಮಾರು 160 ಕಿ. ಲೋ. ಮೀಟರ್ ದೂರಲ್ಲಿರುವ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಡೋರನಹಳ್ಳಿಗೆ ಸಂತಸದಿಂದಲೇ ಪಾದಯಾತ್ರೆ ಮಾಡುತ್ತಿದ್ದಾರೆ.

Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್ Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್

ಸಂತ ಆಂತೋಣಿಯವರು ನಂಬಿದ ಭಕ್ತರಿಗೆ ಕೈ ಬಿಡುವುದಿಲ್ಲ ಎನ್ನುವುದಕ್ಕೆ ತಾನು ಗೆಲುವು ಸಾಧಿಸಿರೋದೆ ಸಾಕ್ಷಿ ಎಂದು ಸೆಲ್ವಂ ಹೇಳಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ.

English summary
Selwam who won the gram panchayat election in Hanur, Chamarajanagar started padayatra around 160 km to K. R. Nagar Dornahalli Anthony church.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X