ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪ ಎನ್ನದಿದ್ದಕ್ಕೆ ಮಗಳನ್ನೇ ಕೊಂದ; 6 ತಿಂಗಳ ನಂತರ ಜಿಗಣಿಯಲ್ಲಿ ಸಿಕ್ಕಿಬಿದ್ದ

|
Google Oneindia Kannada News

ಚಾಮರಾಜನಗರ, ಮಾರ್ಚ್ 9: ಮಗಳನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಆರು ತಿಂಗಳ ನಂತರ ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ತಾಲ್ಲೂಕಿನ ರಾಮಾಪುರದ ಕೆಂಡಯ್ಯ ನಾಗರಾಜು ಎಂಬಾತನೇ ಮಗಳನ್ನು ಕೊಂದು ಪರಾರಿಯಾದವನು. ಈತನ ಹೆಂಡತಿ ರಾಜೇಶ್ವರಿ ತನ್ನ ಆರು ವರ್ಷದ ಮಗಳಾದ ಪೂರ್ಣಿಮಾ ಕಾಣೆಯಾಗಿದ್ದಾಳೆಂದು ಸೆ.23, 2019ರಂದು ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಸ್ತಿ ಆಸೆಗಾಗಿ ಚಿಕ್ಕಪ್ಪನಿಂದಲೇ ಕೊಲೆಯಾದ 7 ವರ್ಷದ ಬಾಲಕಆಸ್ತಿ ಆಸೆಗಾಗಿ ಚಿಕ್ಕಪ್ಪನಿಂದಲೇ ಕೊಲೆಯಾದ 7 ವರ್ಷದ ಬಾಲಕ

ಈ ಸಂಬಂಧ ರಾಮಾಪುರ ಪಿಐ ಮನೋಜ್‌ಕುಮಾರ್ ನೇತ್ರತ್ವದ ತಂಡ ಕಾಣೆಯಾಗಿದ್ದ ಮಗುವನ್ನು ಪತ್ತೆ ಹಚ್ಚಲು ವಿವಿಧ ರೀತಿಯಲ್ಲಿ ತನಿಖೆ ಕೈಗೂಂಡಿದ್ದರು.

Father Who Killed Daughter In Hanuru Caught After 6 Months

Recommended Video

IPL ಕಪ್ ಗಾಗಿ RCB ಅಭಿಮಾನಿ ಮಾಡಿದ್ದೇನು ನೋಡಿ..! ಶಾಕ್ ಆಗ್ತೀರ | Oneindia Kannada

ಕೊನೆಗೆ ಬಾಲಕಿಯ ತಂದೆ ಮಗಳು ಕಾಣೆಯಾಗಿರುವ ಬಗ್ಗೆ ಆರು ತಿಂಗಳಿನಿಂದ ವಿಚಾರಿಸಲು ಬಾರದಿದ್ದುದನ್ನು ಗಮನಿಸಿ ಹಾಗೂ ರಾಜೇಶ್ವರಿ ತನ್ನ ಗಂಡನ ವಿರುದ್ಧ ಹೇಳಿದ ಕೆಲ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬಾಲಕಿಯ ತಂದೆ ಕೆಂಡಯ್ಯನಾಗರಾಜುವನ್ನು ಬೆಂಗಳೂರು ಜಿಲ್ಲೆ ಆನೆಕಲ್ ತಾಲೂಕು ಜಿಗಣಿ ಬಳಿ ಪತ್ತೆ ಹಚ್ಚಿದ್ದರು.

ಅನೈತಿಕ ಸಂಬಂಧ ಬಿಡು ಎಂದ ಪತಿಯ ಕೊಲೆ ಮಾಡಿದ ಪತ್ನಿಅನೈತಿಕ ಸಂಬಂಧ ಬಿಡು ಎಂದ ಪತಿಯ ಕೊಲೆ ಮಾಡಿದ ಪತ್ನಿ

ನಂತರ ತನಿಖೆ ಕೈಗೊಂಡಾಗ ತನ್ನ ಕುಟುಂಬದಲ್ಲಿ ಕೆಲ ಕಹಿ ಘಟನೆಗಳಿಂದ, ತನ್ನ ಮಗಳೇ ತನ್ನನ್ನು ಅಪ್ಪ ಎಂದು ಕರೆಯದೆ ಬೇರೆ ಯಾರನ್ನೋ ಅಪ್ಪ ಎಂದು ಕರೆಯುತ್ತಿದ್ದುದಕ್ಕೆ ಬೇಸತ್ತು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಲೆ ನಡೆದ ಸ್ಥಳದ ಮಹಜರು ನಡೆಸಲಾಗಿದೆ.

English summary
Ramapura police arrested the accused father after six months, who killed his daughter and fled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X