ಹೆಚ್ಚಾದ ಕೊರೊನಾ ಕೇಸ್: ಚಾಮರಾಜನಗರದಲ್ಲಿ ರಸ್ತೆ ತಡೆ
ಚಾಮರಾಜನಗರ, ಜುಲೈ 6: ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರತಿದಿನಕ್ಕೆ 2 ಸಾವಿರ ಹೊಸ ಕೇಸ್ಗಳು ಬರುತ್ತಿವೆ.
ಚಾಮರಾಜನಗರದಲ್ಲಿ ಕೊರೊನಾ ಪ್ರಕರಣ ಶತಕ ದಾಟಿದೆ. ಈ ಹಿನ್ನೆಲೆ ಗ್ರಾಮಕ್ಕೆ ಬಸ್ ಬರದಂತೆ ಸೋಲಿಗರಿಂದ ರಸ್ತೆ ತಡೆ ಮಾಡಲಾಗಿದೆ. ಬಿಳಿಗಿರಿ ರಂಗನಾಥ ಬೆಟ್ಟದ ಹೊಸಪೋಡು ಬಳಿ ಘಟನೆ ನಡೆದಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಜಿಲ್ಲಾಡಳಿತ ವಿಧಿಸಿದೆ.
ಚಾಮರಾಜನಗರದಲ್ಲಿ ಗೂಡ್ಸ್ ವಾಹನಗಳ ಮಾಲೀಕರ ಪ್ರತಿಭಟನೆ
ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಕೆಎಸ್ಆರ್ಟಿಸಿ ಬಿಳಿಗಿರಿ ರಂಗನಾಥನ ಸನ್ನಿಧಿಗೆ ಯಳದೂರಿನಿಂದ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಬಸ್ ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಿಗರಿಗೆ, ಭಕ್ತರಿಗೆ ಬಿಆರ್ಟಿಗೆ ನಿರ್ಬಂಧ ವಿಧಿಸುವಂತೆ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಬರುತ್ತಿದ್ದು, ಜಿಲ್ಲಾಡಳಿತದಿಂದ ಅದಕ್ಕೆ ನಿರ್ಬಂಧ ತಂದಿದೆ.