ಪ್ರಸಾದದಲ್ಲಿ ವಿಷ: ತಮಿಳುನಾಡಿನ ಕಾಳಪ್ಪನ ಮೇಲೆ ಅನುಮಾನ
Recommended Video
ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿರುವ ಅನುಮಾನ ವ್ಯಕ್ತವಾಗಿದ್ದು, ಬಹುತೇಕರು ಈ ಕೃತ್ಯಕ್ಕೆ ತಮಿಳುನಾಡಿನ ಕಾಳಪ್ಪನೇ ಕಾರಣ ಎಂಬ ಅನುಮಾನಿಸುತ್ತಿದ್ದಾರೆ.
ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!
ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷಪೂರಿತ ಪ್ರಸಾದ ಸೇವಿಸಿ 11 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯಲು ದ್ವೇಷವೇ ಕಾರಣ ಎನ್ನಲಾಗುತ್ತಿದೆ.
ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!
ತಮಿಳುನಾಡು ಮೂಲದ ಕಾಳಪ್ಪ ಎಂಬುವರು ಮಾರಮ್ಮ ದೇವಾಲಯವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಕೆಲವು ದಿನಗಳ ಹಿಂದಷ್ಟೆ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ಬಳಿ ಗಲಾಟೆ ಮಾಡಿದ್ದರು. ಈತ ಬ್ರಹ್ಮೇಶ್ವರಿ ದೇವಾಲಯಕ್ಕೆ ಸಂಬಂಧಪಟ್ಟವನಾಗಿದ್ದಾನೆ.
ಅದೇ ವ್ಯಕ್ತಿಯೇ ಈಗ ಪ್ರಸಾದದಲ್ಲಿ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಮ್ಮ ದೇವಾಲಯದ ವಿವಾದ ನ್ಯಾಯಾದಲ್ಲಿದ್ದು ಇತ್ತೀಚೆಗಷ್ಟೆ ತೀರ್ಪು ಕಾಳಪ್ಪನ ವಿರುದ್ಧವಾಗಿ ಬಂದಿತ್ತು.
ದೇಗುಲದ ಪ್ರಸಾದವೇ ವಿಷವಾಗಿ... ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯ ಬಂದ್
ಮಾರಮ್ಮ ದೇವಾಲಯದಲ್ಲಿ ನಾಲ್ಕು ಸಿಸಿಟಿವಿಗಳಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ದೇವಾಲಯಕ್ಕೆ ಇಂದು ಗುಪ್ತಚರ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಬೆಳಿಗ್ಗಿನಿಂದಲೂ ದೇವಾಲಯದ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಿದ್ದಾರೆ.