ಚಾಮರಾಜನಗರ ದಸರಾ 2022: ಅದ್ಧೂರಿ ಆಚರಣೆಗೆ ಸಚಿವ ವಿ.ಸೋಮಣ್ಣ ಸೂಚನೆ
ಚಾಮರಾಜನಗರ, ಸೆಪ್ಟೆಂಬರ್, 22: ಸೆಪ್ಟೆಂಬರ್ 27ರಿಂದ 30ರವರೆಗೆ 4 ದಿನಗಳ ಕಾಲ ಚಾಮರಾಜನಗರ ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ವೈವಿಧ್ಯಮಯವಾಗಿ ದಸರಾ ಹಬ್ಬ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮಿತಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ಸಭೆ ನಡೆಸಲಾಗಿತ್ತು. ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಚಿವ ವಿ. ಸೋಮಣ್ಣನವರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಐತಿಹಾಸಿಕ ಪರಂಪರೆ ಹಿನ್ನೆಲೆಯಿರುವ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಬೇಕು ಎಂದರು.
ಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆ
ಚಾಮರಾಜೇಶ್ವರ
ದೇವಾಲಯದ
ಬಳಿ
ಉತ್ಸವ
ನಗರದ
ಚಾಮರಾಜೇಶ್ವರ
ದೇವಾಲಯದ
ಬಳಿ
ದಸರಾ
ಮಹೋತ್ಸವದ
ಪ್ರಧಾನ
ವೇದಿಕೆ
ಅಚ್ಚುಕಟ್ಟಾಗಿ
ಹಾಗೂ
ವೈಭವಯುತವಾಗಿ
ಇರಬೇಕು.
ಈ
ಬಾರಿ
ದೀಪಾಲಂಕಾರ
ವಿಶೇಷವಾಗಿರಬೇಕು.
ಸರ್ಕಾರಿ
ಕಟ್ಟಡಗಳು,
ಪ್ರಮುಖ
ವೃತ್ತಗಳು,
ರಸ್ತೆಗಳು,
ಇತರೆ
ಕಡೆಗಳಲ್ಲಿಯೂ
ದೀಪಾಲಂಕಾರವನ್ನು
ಮಾಡಬೇಕು.
ಜಿಲ್ಲಾ
ಕೇಂದ್ರದ
ಎಲ್ಲಾ
ದಿಕ್ಕಿನ
ಪ್ರವೇಶ
ದ್ವಾರಗಳಲ್ಲಿ
ಸ್ವಾಗತ
ಕಮಾನುಗಳು
ದೀಪಾಲಂಕಾರದಿಂದ
ಕೂಡಿರಬೇಕು.
ತಾಲೂಕು
ಕೇಂದ್ರಗಳಲ್ಲಿಯೂ
ಸಹ
ಗ್ರಾಮೀಣ
ದಸರಾ
ನಡೆಯಲಿರುವ
ಹಿನ್ನೆಲೆಯಲ್ಲಿ
ಅಲ್ಲಿಯೂ
ದೀಪಾಲಂಕಾರ
ಆಗಬೇಕು.
ಜಿಲ್ಲೆಯ
ದಸರಾ
ಮಹೋತ್ಸವದಲ್ಲಿ
ದೀಪಾಲಂಕಾರ
ಕಳೆಗಟ್ಟಬೇಕು
ಎಂದು
ಸಚಿವರು
ಸೆಸ್ಕ್
ಅಧಿಕಾರಿಗಳಿಗೆ
ಕಟ್ಟುನಿಟ್ಟಿನ
ಸೂಚನೆ
ನೀಡಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಮೂಡಿಬರಬೇಕು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಬೇಕು. ಹೊರ ಭಾಗದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರಸ್ತುತ ಪಡಿಸುವಂತಾಗಬೇಕು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಧಾನ್ಯತೆ ನೀಡಿ, ಉತ್ತಮವಾಗಿ ದಸರಾ ಕಾರ್ಯಕ್ರಮಗಳು ನಡೆಯಬೇಕು ಎಂದು ಸಚಿವರು ತಿಳಿಸಿದರು.
ಮೈಸೂರು ದಸರಾ ಮಹೋತ್ಸವ 2022: ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದ ಸರಕಾರ
ಚಾಮರಾಜನಗರ
ದಸರಾ
ಕಾರ್ಯಕ್ರಮಗಳು
ಕಲಾತಂಡಗಳ
ಮೆರವಣಿಗೆ,
ಸ್ತಬ್ದ
ಚಿತ್ರಗಳ
ಪ್ರದರ್ಶನಗಳೂ
ಸಹ
ಅರ್ಥಪೂರ್ಣವಾಗಿ
ಮೂಡಿಬರಬೇಕು.
ರೈತ
ದಸರಾ,
ಮಹಿಳಾ
ದಸರಾ
ಸೇರಿದಂತೆ
ಇನ್ನಿತರ
ಎಲ್ಲಾ
ಕಾರ್ಯಕ್ರಮಗಳು
ಅಚ್ಚುಕಟ್ಟಾಗಿ
ನಡೆಯಬೇಕು.
ಪೂಜಾ
ಕೈಂಕರ್ಯಗಳು
ಅಚ್ಚುಕಟ್ಟಾಗಿ
ನೆರವೇರಲಿ.
ದಸರಾ
ವೇಳೆ
ಸ್ವಚ್ಚತೆಗೆ
ಹೆಚ್ಚು
ಆದ್ಯತೆ
ನೀಡಿ.
ಎಲ್ಲಾ
ಕಡೆಯೂ
ಶುಚಿತ್ವ
ವಹಿಸುವ
ಕೆಲಸ
ಬೇಗನೆ
ಪೂರ್ಣಗೊಳಿಸಿ.
ಎಲ್ಲಿಯೂ
ಲೋಪವಾಗದ
ಹಾಗೆ
ಕಾರ್ಯಕ್ರಮಗಳನ್ನು
ನಿರ್ವಹಿಸಿ
ಎಂದು
ಸಚಿವರು
ನಿರ್ದೇಶನ
ನೀಡಿದರು.
ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿಯೂ ದಸರಾ ಆಚರಣೆ ವಿಜೃಂಭಣೆಯಿಂದ ನಡೆಯುವಂತಾಗಬೇಕು. ಈ ಸಂಬಂಧ ಶಾಸಕರೊಂದಿಗೆ ಚರ್ಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಉತ್ತಮ ಕಾರ್ಯಕ್ರಮ ಆಯೋಜನೆಗೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.