ಬಂಡೀಪುರದಲ್ಲಿ ಸೆಲ್ಫೀ ತೆಗೆದರೆ ಸಾವಿರ ರೂಪಾಯಿ ದಂಡ!
ಬೆಂಗಳೂರು, ಮೇ 30: ಬಂಡೀಪುರದಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಅದರೊಂದಿಗೆ ಅರಣ್ಯ ಇಲಾಖೆ, ಸರ್ಕಾರ ಜತೆಗೂಡಿ ಅಲ್ಲಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ಕೆಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆ ಕಾನೂನುಗಳ ಉಲ್ಲಂಘನೆಯ ಪ್ರಕಟಣಗಳೂ ಕೂಡ ಹೆಚ್ಚಾಗುತ್ತಿದೆ.
ದಿನನಿತ್ಯ ಸಾಕಷ್ಟು ಮಂದಿ ಬಂಡಿಪುರದ ಹೆದ್ದಾರಿಗಳಲ್ಲಿ ಹಾದು ಹೋಗುವಾಗ ಸಂರಕ್ಷಿತ ಅರಣ್ಯದಲ್ಲಿ ಪರಿಚಯಿಸಲಾಗಿದ್ದ ನೂತನ ನಿಯಮಗಳನ್ನು ಉಲ್ಲಂಘನೆ ಮಾಡಿ 1 ಸಾವಿರ ರೂ ದಂಡವನ್ನು ಪಾವತಿಸುತ್ತಿದ್ದಾರೆ.
ಹಾಗಾದರೆ ಅಲ್ಲಿರುವ ಕಾನೂನು ಏನೇನು ಎಂದು ನೋಡುವುದಾದರೆ ಪ್ರಾಣಿಗಳಿಗೆ ಆಹಾರ ಹಾಕುವುದು, ಧೂಮಪಾನ ಮಾಡುವುದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದು, ಹಾರನ್ ಮಾಡುವುದು ಹೀಗೆ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿ 1 ರಿಂದ 2 ಸಾವಿರ ರೂ ದಂಡ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿವರ್ಷ ಎಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಬಂಡಿಪುರಕ್ಕೆ ಬರುವುದರಿಂದ ನಿಯಮಗಳ ಉಲ್ಲಂಘನೆ ಸಹ ಹೆಚ್ಚಾಗುತ್ತಿವೆ. ಮೈಸೂರು-ಮನನಂತವಾಡಿ ಮತ್ತು ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಹೆದ್ದಾರಿಗಳಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ದಂಡ ವಿಧಿಸುತ್ತಿದೆ.
ಈ ನಿಯಮ ಜಾರಿಯಾದಾಗಿನಿಂದಲೂ ಬಂಡಿಪುರ ಅಧಿಕಾರಿ ಪ್ರತಿ ದಿನ 12 ಸಾವಿರದಿಂದ 15 ಸಾವಿರ ರುಪಾಯಿವರೆಗೆ ಸಂಗ್ರಹಿಸುತ್ತಿದ್ದಾರೆ. ಎರಡು ಹೆದ್ದಾರಿಯಲ್ಲೂ ದಿನನಿತ್ಯ 5 ರಿಂದ 6 ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಯಾರೂ ಕೂಡ ಈ ಕಾನೂನುಗಳನ್ನು ಗಂಭೀರವಾಗಿ ಪರಿಗಣಿಸದಂತೆ ಕಾಣುತ್ತಿಲ್ಲ.