ಟಿಪ್ಪು ಜಯಂತಿ ವಿರೋಧಿಸಿ ಮೆರವಣಿಗೆ: ಕಾರ್ಯಕರ್ತರ ಬಂಧನ
ಚಾಮರಾಜನಗರ, ನವೆಂಬರ್, 8: ಟಿಪ್ಪು ಜಯಂತಿ ಆಚರಣೆ ಮಾಡವುದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರನ್ನು ಚಾಮರಾಜನಗರದಲ್ಲಿ ಬಂಧಿಸಲಾಗಿದೆ.
ಚಾಮರಾಜನಗರದ ಪ್ರಮುಖ ವೃತ್ತಗಳಲ್ಲಿ ಪಕ್ಷದ ನಾಯಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಚಾಮರಾಜೇಶ್ವರ ದೇವಾಲಯದ ಮುಂಭಾಗ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂದಿಸಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ ಹಲವು ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದರು.
ಮತ್ತೊಂದೆಡೆ ಜಿಲ್ಲಾಡಳಿತ ಭವನದಲ್ಲಿ ಹಿಂದೂ ಜಾಗೃತಿ ವೇದೆಕೆ ರಾಜ್ಯ ಸಂಚಾಲಕ ಉಲ್ಲಾಸ್ ಕಾರಂತ್ ಮಾತನಾಡಿ ಮುಸಲ್ಮಾನರೇ ಜಯಂತಿ ವಿರೋದಿಸುತ್ತಿರುವಾಗ ಅವಿವೇಕಿ ಮುಖ್ಯಮಂತ್ರಿ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಓಟ್ ಬ್ಯಾಂಕ್ ಗೆ ಇವರನ್ನೆ ಇವರೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಟಿಪ್ಪು
ಜಯಂತಿಗೆ
ಆಚರಣೆಗೆ
ಅವಕಾಶ
ಕಲ್ಪಿಸಬಾರದು
ಎಂದು
ಜಿಲ್ಲಾಧಿಕಾರಿ
ಕಚೇರಿಗೆ
ಮನವಿಪತ್ರ
ಸಲ್ಲಿಸಲು
ಕಾರ್ಯಕರ್ತರು
ಮುಂದಾದರು
ಆದರೆ
ಜಿಲ್ಲಾಧಿಕಾರಿಯವರು
ಮನವಿಪತ್ರ
ಸ್ವೀಕರಿಲಸು
ಮುಂದೆ
ಬಾರದಿದ್ದರಿಂದ
ಕಚೇರಿಗೆ
ಮುತ್ತಿಗೆ
ಹಾಕಲು
ಕಾರ್ಯಕರ್ತರು
ಯತ್ನಿಸಿದರು.
ನಂತರ ಜಿಲ್ಲಾಧಿಕಾರಿಯವರು ಬಂದು ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.