ಭಾರತೀಯ ರೈಲ್ವೆ ಆಧುನೀಕರಣಕ್ಕೆ ವಿಶ್ವ ಬ್ಯಾಂಕ್ ನೆರವು
ನವದೆಹಲಿ, ಜೂ. 24: ಭಾರತೀಯ ರೈಲ್ವೆ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಆಧುನೀಕರಿಸುವ ಪ್ರಯತ್ನಗಳನ್ನು ಬೆಂಬಲಿಸಲು ವಿಶ್ವ ಬ್ಯಾಂಕ್ 245 ಮಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ತಿಳಿಸಿದೆ.
ಭಾರತೀಯ ರೈಲ್ವೆ ಲಾಜಿಸ್ಟಿಕ್ಸ್ ಯೋಜನೆಯು ಭಾರತವು ರಸ್ತೆಯಿಂದ ರೈಲಿಗೆ ಹೆಚ್ಚಿನ ಸರಕು ಸಾಗಣೆ ಮಾಡಲು ಸಹಾಯ ಮಾಡುತ್ತದೆ. ಇದು ಸಾರಿಗೆಯನ್ನು ಸರಕು ಮತ್ತು ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಕ್ರಿಯಾಶೀಲವನ್ನಾಗಿ ಮಾಡುತ್ತದೆ. ಅಲ್ಲದೆ ಇದು ಪ್ರತಿ ವರ್ಷ ಲಕ್ಷಾಂತರ ಟನ್ಗಳಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಯೋಜನೆಯು ರೈಲ್ವೆ ವಲಯದಲ್ಲಿ ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಸಹ ಉತ್ತೇಜಿಸುತ್ತದೆ.
ಜೂನ್ 21, ಇಂದಿನಿಂದ ರೈಲಿನಲ್ಲಿ ರಾಮಾಯಣ ಯಾತ್ರೆ- ಟಿಕೆಟ್ ದರ ಇತ್ಯಾದಿ ವಿವರ
ಮಾರ್ಚ್ 2020ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 1.2 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾಗಿದೆ. ಆದರೂ, ಭಾರತದ ಸರಕು ಸಾಗಣೆಯ ಶೇಕಡಾ 71ರಷ್ಟನ್ನು ರಸ್ತೆಯ ಮೂಲಕ ಮತ್ತು ಕೇವಲ 17 ಶೇಕಡಾ ರೈಲಿನ ಮೂಲಕ ಸಾಗಿಸಲಾಗುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ನೆರವು ನೀಡಲು ಮುಂದೆ ಬಂದಿದೆ.
ಭಾರತೀಯ ರೈಲ್ವೆಯು ತನ್ನ ಸಾಮರ್ಥ್ಯದ ನಿರ್ಬಂಧಗಳನ್ನು ಸೀಮಿತಗೊಳಿಸಿದೆ ಮತ್ತು ಸಾಗಣೆಯ ವೇಗ ಮತ್ತು ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ತಿಳಿಸಿದೆ. ಪರಿಣಾಮವಾಗಿ, ಇದು 2017-18ನೇ ವರ್ಷದಲ್ಲಿ ಟ್ರಕ್ಗಳಿಗೆ ಹೋಲಿಸಿದರೆ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿದೆ. ಅದರ ಮಾರುಕಟ್ಟೆ ಪಾಲು ಒಂದು ದಶಕದ ಹಿಂದೆ ಶೇಕಡಾ 52ರಿಂದ 32ಕ್ಕೆ ಕುಸಿದಿದೆ.
ಭಾರತದಲ್ಲಿ ಬಡತನದ ಬಗ್ಗೆ ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದ್ದು ಏನು?
ಹಸಿರು ಮನೆ ಪರಿಣಾಮ ಹೊರಸೂಸುವಿಕೆಗೆ ರಸ್ತೆ ಸರಕು ಸಾಗಣೆಯು ಅತಿದೊಡ್ಡ ಕೊಡುಗೆಯಾಗಿದೆ. ಸರಕು ಸಾಗಣೆ ವಲಯದಲ್ಲಿ ಸುಮಾರು ಶೇಕಡ 95ರಷ್ಟು ಹೊರಸೂಸುವಿಕೆಗೆ ಕಾರಣವಾಗಿದೆ. 2018 ರಲ್ಲಿ ಸುಮಾರು ಶೇಕಡಾ 12.3ರಷ್ಟು ರಸ್ತೆ ಅಪಘಾತಗಳು ಮತ್ತು 15.8 ಶೇಕಡಾ ರಸ್ತೆ ಸಾರಿಗೆ ಸಂಬಂಧಿತ ಸಾವುಗಳಿಗೆ ಈ ಸಾರಿಗೆ ಟ್ರಕ್ಗಳು ಕಾರಣವಾಗಿವೆ.
ಹಸಿರುಮನೆ ಅನಿಲಗಳ ನಿಗ್ರಹ
ರೈಲುಗಳು ಟ್ರಕ್ಗಳ ಸಿಎನ್ಜಿಗಿಂತ ಹೊರಸೂಸುವಿಕೆಯ ಐದನೇ ಒಂದು ಭಾಗವನ್ನು ಮಾತ್ರ ಹೊರಸೂಸುತ್ತದೆ. 2030ರ ವೇಳೆಗೆ ಭಾರತೀಯ ರೈಲ್ವೆ ನಿವ್ವಳ- ಶೂನ್ಯ ಇಂಗಾಲದ ಹೊರಸೂಸುವಿಕೆಯಾಗಲು ಯೋಜನೆ ಹಾಕಿಕೊಳ್ಳುತ್ತಿದೆ. ಇದು ಪ್ರತಿ ವರ್ಷ 7.5 ಮಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅದು ಹೇಳಿದೆ.
ದಟ್ಟಣೆಯನ್ನು ಕಡಿಮೆ ಮಾಡಲು ನೆರವು
ಹಸಿರುಮನೆ ಅನಿಲ ಪರಿಣಾಮಗಳನ್ನು ಕಡಿಮೆ ಮಾಡುವಾಗ ಹೊಸ ಯೋಜನೆಯು ಭಾರತದಲ್ಲಿ ಲಕ್ಷಾಂತರ ರೈಲು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ರೈಲ್ವೆ ಮಾರ್ಗಗಳು ಸರಕು ಸಾಗಣೆಗೆ ಮೀಸಲಿಟ್ಟ ಮಾರ್ಗಗಳಲ್ಲಿ ಚಲಿಸುವುದರೊಂದಿಗೆ ದಟ್ಟಣೆಯನ್ನು ಕಡಿಮೆ ಮಾಡುತ್ತವೆ ಎಂದು ವಿಶ್ವ ಬ್ಯಾಂಕ್ನ ಭಾರತದ ಕಾರ್ಯಾಚರಣೆಯ ವ್ಯವಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಿಡೆಕಿ ಮೋರಿ ಹೇಳಿದ್ದಾರೆ.
ಭಾರತೀಯ ಸಂಸ್ಥೆಗಳು ಹೆಚ್ಚು ಸ್ಪರ್ಧಾತ್ಮಕ
ರೈಲ್ವೆಯನ್ನು ವಿಸ್ತಾರವಾದ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸುವುದು ಭಾರತದ ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡಲು ಅಗತ್ಯವಾಗಿದೆ. ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಹೆಚ್ಚು ಭಾರತೀಯ ಸಂಸ್ಥೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ. ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (ಐಆರ್ಡಿಬಿ) ಯಿಂದ ಪಡೆದ ಸಾಲವನ್ನು ವಿಶ್ವ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು ಅನುಮೋದಿಸಿದೆ. ಏಳು ವರ್ಷಗಳ ಹೆಚ್ಚುವರಿ ಅವಧಿಯನ್ನು ಒಳಗೊಂಡಂತೆ 22 ವರ್ಷಗಳ ಅವಧಿಯನ್ನು ಹೊಂದಿದೆ. ಹೊಸ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್- 3 (ಇಎಫ್ಡಿಸಿ) ಅನ್ನು ವಿಶ್ವಬ್ಯಾಂಕ್ ಸಹ ಬೆಂಬಲಿಸುತ್ತದೆ.
ಹಣಕಾಸನ್ನು ಬಳಸಿಕೊಳ್ಳುವಲ್ಲಿ ಗಮನ
ಖಾಸಗಿ ವಲಯವನ್ನು ಉದ್ಯಮಕ್ಕೆ ತೊಡಗಿಸಿಕೊಳ್ಳುವ ಮೂಲಕ ಮತ್ತು ಗ್ರಾಹಕ ಆಧಾರಿತ ವಿಧಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹಣಕಾಸನ್ನು ಬಳಸಿಕೊಳ್ಳುವಲ್ಲಿ ಇದು ಪ್ರಮುಖ ಗಮನಹರಿಸುತ್ತದೆ ಎಂದು ವಿಶ್ವ ಹಣಕಾಸು ಸಂಸ್ಥೆ ತಿಳಿಸಿದೆ. ಈ ಯೋಜನೆಯು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) ಅನ್ನು ವಾಣಿಜ್ಯ ಸಂಸ್ಥೆಯಾಗಿ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವುದನ್ನು ಬೆಂಬಲಿಸುತ್ತದೆ ಹಾಗೂ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸಲು ಸಹ ಸಜ್ಜುಗೊಳಿಸುತ್ತದೆ.