ಜೇಬಿನ ತುಟಿ ಕಚ್ಚುವಷ್ಟು ತುಟ್ಟಿಯಾಗಲಿದೆ ನವೆಂಬರ್ ತಿಂಗಳು, ಏಕೆ?
ನವೆಂಬರ್ ತಿಂಗಳು ಗ್ರಾಹಕರಿಗೆ ದುನಿಯಾ ದುಬಾರಿ ಆಗಲಿದೆಯಾ? ನೀತಿ ನಿಯಮದಲ್ಲಿನ ಬದಲಾವಣೆಗಳು, ಕಚ್ಚಾ ತೈಲ ದರಗಳ ಏರಿಕೆ ಮತ್ತು ಕೆಲವು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ವಸ್ತುಗಳ ಬೆಲೆಯಲ್ಲಿ ಮುಂದಿನ ತಿಂಗಳು ಏರಿಕೆಯಾಗಲಿದೆ ಎಂಬುದರ ಇಷಾರೆ ನೀಡುತ್ತಿದೆ. ಯಾವುದು ಏರಿಕೆ ಆಗಬಹುದು ಎಂಬುದರ ಮಾಹಿತಿ ಇಲ್ಲಿದೆ.
ಗೃಹಬಳಕೆ
ವಸ್ತುಗಳು
ರೆಫ್ರಿಜರೇಟರ್,
ಏರ್
ಕಂಡೀಷನರ್
ಹಾಗೂ
ವಾಷಿಂಗ್
ಮಷೀನ್
ಗಳ
ಬೆಲೆಯಲ್ಲಿ
ಶೇ
3ರಿಂದ
5ರಷ್ಟು
ಜಾಸ್ತಿಯಾಗಬಹುದು.
ಇನ್
ಪುಟ್
ದರ
ಶೇ
30ರಿಂದ
50ರಷ್ಟು
ಹೆಚ್ಚಾಗಿದೆ.
ಅದನ್ನು
ಗ್ರಾಹಕರ
ಮೇಲೆ
ಹಾಕಲು
ತಯಾರಕರು
ನಿರ್ಧರಿಸಿದ
ಪರಿಣಾಮವಿದು.
ಸ್ಟೀಲ್
ಬೆಲೆಯಲ್ಲಿ
ಶೇ
ನಲವತ್ತು
ಹಾಗೂ
ತಾಮ್ರದ
ಬೆಲೆಯಲ್ಲಿ
ಶೇ
ಐವತ್ತರಷ್ಟು
ಏರಿಕೆಯಾಗಿದೆ.
ದಸರಾದಲ್ಲಿ ಡಲ್ ಆಗಿದ್ದ ಚಿನ್ನದ ಬೆಲೆ, ದೀಪಾವಳಿಯಲ್ಲಿ ಏರಿಕೆ!
ಇನ್ನು ರೆಫ್ರಿಜರೇಟರ್ ಉತ್ಪಾದನೆಗಾಗಿಯೇ ಬಳಸುವ ಎಂಡಿಐ ಎಂಬ ಮುಖ್ಯ ರಾಸಾಯನಿಕವು ಜಾಗತಿಕ ಮಟ್ಟದಲ್ಲೇ ಕೊರತೆಯಾಗಿ ಅದರ ಬೆಲೆ ದುಪ್ಪಟ್ಟಾಗಿದೆ. ಈ ಎಲ್ಲದರ ಹೊಡೆತ ಗ್ರಾಹಕರ ಮೇಲೆ ಬೀಳಬಹುದು.
ವಿಮಾನಯಾನ
ದರ
ಇಷ್ಟು
ಸಮಯ
ಕಚ್ಚಾ
ತೈಲ
ದರದಲ್ಲಿ
ಇಳಿಕೆ
ಇದ್ದಿದ್ದರಿಂದ
ವಿಮಾನ
ಯಾನ
ಕಂಪನಿಗಳು
ಕಡಿಮೆ
ಬೆಲೆಯಲ್ಲಿ
ಸೇವೆ
ನೀಡಿದವು.
ಇದರಿಂದ
ದೇಶೀಯ
ವಿಮಾನ
ದಟ್ಟಣೆಯಲ್ಲಿ
ಶೇ
ಇಪ್ಪತ್ತರಷ್ಟು
ಏರಿಕೆ
ಕಂಡಿತ್ತು.
ಆದರೆ
ಇನ್ನು
ಮುಂದೆ
ಶೇ
15ರಷ್ಟು
ಹೆಚ್ಚು
ಹಣ
ತೆರಲು
ಸಿದ್ಧವಾಗಬೇಕಿದೆ.
ವಿಮಾನ
ಯಾನ
ಕಂಪನಿಗಳು
ಶೇ
10ರಿಂದ
15ರಷ್ಟು
ಪ್ರಯಾಣ
ದರ
ಏರಿಕೆ
ಮಾಡುವ
ಸನ್ನಾಹದಲ್ಲಿವೆ.
ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ
ತೈಲ ಉತ್ಪಾದನೆ ಮಾಡುವ ಕಂಪನಿಗಳು ವಿಮಾನದಲ್ಲಿ ಬಳಸುವ ಇಂಧನದ ಬೆಲೆಯನ್ನು ಶೇ ಆರರಷ್ಟು ಏರಿಸಿವೆ. ಏಕೆಂದರೆ ಡಾಲರ್ ನ ವಿರುದ್ಧ ರುಪಾಯಿ ಮೌಲ್ಯ ಕುಸಿದಿದ್ದರಿಂದ ಬೆಲೆ ಏರಿಸಲಾಗಿದೆ.
ಮನೆಯ
ಹೊರಗಿನ
ಆಹಾರವೂ
ದುಬಾರಿ
ಇನ್
ಪುಟ್
ಕ್ರೆಡಿಟ್
ಗೆ
ಅವಕಾಶ
ನೀಡದೆ
ಈಗಿರುವ
ಜಿಎಸ್
ಟಿ
ದರ
ಶೇ
18ರಿಂದ
12ಕ್ಕೆ
ಇಳಿಸಿದರೆ
ರೆಸ್ಟೋರೆಂಟ್
ಗಳ
ಆಹಾರ
ದರದಲ್ಲಿ
ಭಾರೀ
ಏರಿಕೆಯಾಗಲಿದೆ.
ಈಗ
ಏಸಿ
ರೆಸ್ಟೋರೆಂಟ್
ಗಳು
ಶೇ
18ರಷ್ಟು
ಜಿಎಸ್
ಟಿ
ಪಾವತಿಸುತ್ತಿವೆ.
ಇನ್
ಪುಟ್
ಕ್ರೆಡಿಟ್
ಕ್ಲೇಮ್
ಮಾಡಿಕೊಳ್ಳಬಹುದಾಗಿದೆ.
ಬಾಡಿಗೆ,
ವಿದ್ಯುತ್,
ಸಾಗಣೆ
ಇತ್ಯಾದಿ
ವೆಚ್ಚಗಳ
ಮೇಲೆ
ಇನ್
ಪುಟ್
ಕ್ರೆಡಿಟ್
ಕ್ಲೇಮ್
ಮಾಡಬಹುದು.
ದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶ
ಆದರೆ, ಜಿಎಸ್ ಟಿ ಶೇ 12ಕ್ಕೆ ಇಳಿಸಿದರೆ ತೆರಿಗೆ ವಿನಾಯಿತಿಗಳು ಹೋಗುತ್ತವೆ. ಇದರಿಂದ ವೆಚ್ಚಗಳು ಶೇ ಏಳರಿಂದ ಹತ್ತರಷ್ಟು ಹೆಚ್ಚಾಗುತ್ತದೆ.
ತೈಲ
ದರ
ಜಾಗತಿಕ
ಮಾರುಕಟ್ಟೆಯಲ್ಲಿ
ಕಚ್ಚಾ
ತೈಲ
ದರ
ಹೆಚ್ಚಾಗುವ
ಸಾಧ್ಯತೆ
ಇದೆ.
ಭಾರತವು
ಶೇ
ಎಂಬತ್ತೆರಡರಷ್ಟು
ಬೇಡಿಕೆಯನ್ನು
ತೈಲ
ಆಮದು
ಮಾಡಿಕೊಳ್ಳುವ
ಮೂಲಕವೇ
ಪೂರೈಸುತ್ತಿದೆ.
ಕಳೆದ
ಆಗಸ್ಟ್
ನಿಂದಲೇ
ಗ್ರಾಹಕರು
ಪೆಟ್ರೋಲ್-
ಡೀಸೆಲ್
ಗೆ
ಹೆಚ್ಚಿನ
ಹಣ
ನೀಡುತ್ತಾ
ಬಂದಿದ್ದಾರೆ.
ಮೊನ್ನೆ
ಅಕ್ಟೋಬರ್
ಮೂರನೇ
ತಾರೀಕು
ಕೇಂದ್ರ
ಸರಕಾರ
ಎರಡು
ರುಪಾಯಿ
ಅಬಕಾರಿ
ಸುಂಕ
ಇಳಿಸಿತು.
ಜಿಎಸ್ ಟಿ ಹೊಡೆತಕ್ಕೆ ಮೈಸೂರ್ ಪಾಕ್ ಸಿಹಿಯಲ್ಲ, ಗೋಡಂಬಿ ರುಚಿಯಲ್ಲ
ಅದೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಮೇಲೆ ಸರಕಾರ ಈ ಕ್ರಮಕ್ಕೆ ಮುಂದಾಯಿತು. ಅದಕ್ಕೂ ಮುನ್ನ ಪೆಟ್ರೋಲ್- ಡೀಸೆಲ್ ದರ ವಿಪರೀತ ಹೆಚ್ಚಾಗಿತ್ತು. ಇನ್ನು ನವೆಂಬರ್ ನಲ್ಲಿ ಬೆಲೆ ಏರಿಕೆಗೆ ಸಿದ್ಧಗೊಳ್ಳಬೇಕಾಗುತ್ತದೆ.