ಆರ್ಥಿಕ ಕುಸಿತ ಕಳೆದ 70 ವರ್ಷಗಳಲ್ಲೇ ಕಂಡಿಲ್ಲ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್
ನವದೆಹಲಿ, ಆಗಸ್ಟ್ 23: ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಬಗ್ಗೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ನೀಡಿರುವ ಹೇಳಿಕೆ ಚರ್ಚೆಗೀಡು ಮಾಡಿದೆ.
ದೇಶದಲ್ಲಿ ಆರ್ಥಿಕ ಕುಸಿತ ಪರಿಸ್ಥಿತಿ ಈ ಹಿಂದೆ ಕಂಡು ಬಂದಿರಲಿಲ್ಲ, ಇಡೀ ಆರ್ಥಿಕ ವಲಯ ಮಂಕಾಗಿದ್ದು, ಕಳೆದ 70 ವರ್ಷಗಳಲ್ಲಿ ನಾವು ಇಂಥ ದ್ರವ್ಯತೆ (liquidity) ಪರಿಸ್ಥಿತಿಯನ್ನು ಎದುರಿಸಿಲ್ಲ ಎಂದಿದ್ದಾರೆ.
ನೀತಿ ಆಯೋಗದ ಉಪಾಧ್ಯಕ್ಷರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ
ಕೇಂದ್ರ ಸರಕಾರವು ಖಾಸಗಿ ವಲಯದ ಆತಂಕವನ್ನು ಹೋಗಲಾಡಿಸಲು ಕ್ರಮ ಕೈಗೊಂಡಿಲ್ಲ, ಹಣಕಾಸು ಕ್ಷೇತ್ರದಲ್ಲಿ ಸಮಸ್ಯೆಯಿದೆ ಎಂಬುದನ್ನು ಗುರುತಿಸಿವೆ, ದೇಶದ ಆರ್ಥಿಕತೆಯು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ಬೆಳವಣಿಗೆಯನ್ನು ಎದುರಿಸುತ್ತಿವೆ.
Recommended Video
ದ್ರವ್ಯತೆ ಪರಿಸ್ಥಿತಿಯ ಕೇವಲ ಸರಕಾರ ಹಾಗೂ ಖಾಸಗಿ ವಲಯದಲ್ಲಿ ಮಾತ್ರವಲ್ಲ, ಖಾಸಗಿ ವಲಯದೊಳಗೆ ಬೇರೆ ಯಾರಿಗೂ ಸಾಲ ನೀಡಲು ಯಾರೂ ಬಯಸುವುದಿಲ್ಲ, ಅರ್ ಬಿ ಐ ರೆಪೋದರ ಸತತ ನಾಲ್ಕು ಬರಿ ಇಳಿಸಿದೆ, ಗ್ರಾಹಕರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಆರ್ ಬಿಐ ಕರೆ ನೀಡಿದೆ. ಬ್ಯಾಂಕೇತರ ಆರ್ಥಿಕ ಕೇಂದ್ರ (NBFC) ಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.