ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!
ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಲ್ಕನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಒಟ್ಟಾರೆ ಐಟಿ ಬಿಟಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಗಿಫ್ಟ್ ಸಿಕ್ಕಿಲ್ಲ.
ಐಟಿ-ಬಿಟಿ
ಕಂಪನಿಗಳನ್ನು
ರಾಜಧಾನಿ
ಬೆಂಗಳೂರು
ಬಿಟ್ಟು
ರಾಜ್ಯದ
ಇತರೆಡೆಗೂ
ವಿಸ್ತರಿಸುವ
ಪ್ರಯತ್ನ
ಈ
ಬಾರಿಯ
ಬಜೆಟ್ನಲ್ಲಾಗುವ
ನಿರೀಕ್ಷೆ
ಸುಳ್ಳಾಗಿದೆ.
ಎರಡು
ಹಾಗೂ
ಮೂರನೇ
ಸ್ತರದ
ನಗರಗಳಿಗೆ
ಐಟಿ
ಕಂಪನಿಗಳನ್ನು
ಕರೆದೊಯ್ಯುವಲ್ಲಿ
ಸರ್ಕಾರ
ಸಂಪೂರ್ಣ
ಮತ್ತೆ
ವಿಫಲವಾಗಿದೆ.
ಕಂಪನಿಗಳ
ಬಹುವಾರ್ಷಿಕ
ಬೇಡಿಯಾದ
ಮೂಲ
ಸೌಕರ್ಯ
ಅಭಿವೃದ್ಧಿಗೆ
ಹೆಚ್ಚಿನ
ಒತ್ತು
ನೀಡಲಾಗಿದೆ.[ಕರ್ನಾಟಕ
ಬಜೆಟ್
2016-17,
ಮುಖ್ಯಾಂಶಗಳು]
ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:[ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]
*
ನ್ಯೂಏಜ್
ಇನ್ಕ್ಯುಬೇಷನ್
ನೆಟ್ವರ್ಕ್
ಅಡಿ
ರಾಜ್ಯಾದ್ಯಂತ
ಸ್ನಾತಕೋತ್ತರ
ಮತ್ತು
ವೃತ್ತಿಪರ
ಶಿಕ್ಷಣ
ಸಂಸ್ಥೆಗಳಲ್ಲಿ
10
ಹೊಸ
ಇನ್ಕ್ಯುಬೇಟರ್ಗಳ
ಸ್ಥಾಪನೆ.[ಸಿದ್ದರಾಮಯ್ಯ
ಬಜೆಟ್:
ಕೈಗಾರಿಕೆಗಳಿಗೆ
ಸಿಕ್ಕಿದ್ದೇನು?]
*
ರಾಜ್ಯಾದ್ಯಂತ
ಇಂಟರ್ನೆಟ್
ಆಫ್
ಥಿಂಗ್ಸ್,
ಎಲೆಕ್ಟ್ರಾನಿಕ್ಸ್
ಸಿಸ್ಟಮ್
ಡಿಸೈನ್
ಮತ್ತು
ಮ್ಯಾನುಫ್ಯಾಕ್ಚರಿಂಗ್,
ಮೊದಲಾದ
ಸಂಭಾವ್ಯ
ಕ್ಷೇತ್ರಗಳಲ್ಲಿ
4
ಟೆಕ್ನಾಲಜಿ
ಬಿಸಿನೆಸ್
ಇನ್ಕ್ಯುಬೇಟರ್ಗಳ
ಸ್ಥಾಪನೆ.[ಸಿದ್ದರಾಮಯ್ಯ
ಬಜೆಟ್ಟಿನಲ್ಲಿ
ಬೆಂಗಳೂರಿಗೆ
ಸಿಕ್ಕಿದ್ದೇನು?]
* ಕಿಯೋನಿಕ್ಸ್ ವತಿಯಿಂದ ಬೆಂಗಳೂರು ಮತ್ತು ಶಿವಮೊಗ್ಗ, ಬಾಗಲಕೋಟೆ ಮತ್ತು ಕಲ್ಬುರ್ಗಿ ಐ ಟಿ ಪಾರ್ಕುಗಳಲ್ಲಿ ಇನ್ಕ್ಯುಬೇಟರ್ ಮತ್ತು ಸಾಮಾನ್ಯ ಇನ್ಸುಟ್ರುಮೆಂಟೇಷನ್ ಸೌಲಭ್ಯ. ಬೆಳಗಾವಿ, ಬೀದರ್ ಮತ್ತು ವಿಜಯಪುರ ಗಳಲ್ಲಿ ಹೊಸ ಐಟಿ ಪಾರ್ಕ್-ಇನ್ಕ್ಯೂಬೇಟರ್ಗಳ ಸ್ಥಾಪನೆ.
*
ರಾಜ್ಯದಲ್ಲಿ
ಶೈಕ್ಷಣಿಕವಾಗಿ
ಹಿಂದುಳಿದಿರುವ
ತಾಲ್ಲೂಕುಗಳ
500
ಪ್ರೌಢಶಾಲೆಗಳಿಗೆ
ಸೈನ್ಸ್
ಲ್ಯಾಬ್
-
ಇನ್
ಎ
ಬಾಕ್ಸ್
ಕಿಟ್ಗಳ
ವಿತರಣೆ.
* ವಿಜಯಪುರ ಜಿಲ್ಲೆಯಲ್ಲಿ ಕಿರು ತಾರಾಲಯ ಸ್ಥಾಪನೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಗುಣಮಟ್ಟ ಉತ್ತಮಪಡಿಸಲು ವಿಷನ್ ಗ್ರೂಪ್ ವತಿಯಿಂದ ಕಾರ್ಯಕ್ರಮ ಆಯೋಜನೆ -8 ಕೋಟಿ ರೂ.
ಇ-ಆಡಳಿತ
*
ಬೆಂಗಳೂರು
ನಗರದಲ್ಲಿ
33
ಬೆಂಗಳೂರು
ಒನ್
ಕೇಂದ್ರಗಳ
ಸ್ಥಾಪನೆ.
* ಜಿಲ್ಲಾ ಮಟ್ಟದಲ್ಲಿ ವಿನೂತನ ಇ-ಆಡಳಿತ ಯೋಜನೆಗಳಿಗೆ ಧನಸಹಾಯ.
*
ರಾಜ್ಯ
ಮಟ್ಟದಲ್ಲಿ
ನಾಗರಿಕ
ಸ್ನೇಹಿ
ಇ-ಆಡಳಿತ
ಯೋಜನೆಗಳನ್ನು
ಅನುಷ್ಠಾನಗೊಳಿಸಲು
ವಿವಿಧ
ಇಲಾಖೆಗಳು
ಮತ್ತು
ಸಂಸ್ಥೆಗಳಿಗೆ
ಪ್ರಶಸ್ತಿ
ನೀಡಲು
ಕ್ರಮ.
*ಮಾಹಿತಿ ತಂತ್ರಜ್ಞಾನದ ಪ್ರಮಾಣಗಳಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನದ ಎಲ್ಲಾ ರಕ್ಷಣಾ ಚಟುವಟಿಕೆಗಳ ಬಲವರ್ಧನೆಗೆ ಸೆಕ್ಯೂರಿಟಿ ಆಪರೇಷನಲ್ ಸೆಂಟರ್ ಸ್ಥಾಪನೆ.
* 20 ರಾಷ್ಟ್ರೀಯ ಇ-ಆಡಳಿತ ಸಮ್ಮೇಳನವನ್ನು ರಾಜ್ಯದಲ್ಲಿ ಫೆಬ್ರವರಿ 2017ರಲ್ಲಿ ಆಯೋಜಿಸಲು ಕ್ರಮ.