ಕೋಟ್ಯಂತರ ಬೆಲೆ ಸ್ಥಿರಾಸ್ತಿ ಮಾರಾಟಕ್ಕಿಳಿದ ಸಹಾರಾ
ನವದೆಹಲಿ, ಡಿ.7: ಹೂಡಿಕೆದಾರರಿಂದ ಸಂಗ್ರಹಿಸಿದ ಮೊತ್ತವನ್ನು ಹಿಂದುರಿಗಿಸುವ ಭರವಸೆ ನೀಡಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರು ತಮ್ಮ ಸ್ಥಿರಾಸ್ತಿ ಮಾರಾಟ ಪ್ರಕ್ರಿಯೆ ಮುಂದುವರೆಸಿದ್ದಾರೆ.
ಗುರ್
ಗಾಂವ್
ನ
ಭೂಮಿಯನ್ನು
1,211
ಕೋಟಿ
ರುಗೆ
ಮಾರಾಟ
ಮಾಡಿದ
ನಂತರ
ಮುಂಬೈ
ಹಾಗೂ
ಜೋಧಪುರದ
ಜಮೀನು
ಮಾರಾಟಕ್ಕೆ
ಸಹಾರಾ
ಸಂಸ್ಥೆ
ಮುಂದಾಗಿದೆ.
ತಲಾ
1,250
ಕೋಟಿ
ರು
ಮೌಲ್ಯಕ್ಕೆ
ಭೂಮಿ
ಮಾರಾಟ
ನಂತರ
ಪುಣೆಯಲ್ಲಿರುವ
ಆಸ್ತಿ
ಮಾರಾಟವಾಗಲಿದೆ.
ಎನ್
ಸಿಆರ್
ಪ್ರದೇಶದ
ರಿಯಲ್
ಎಸ್ಟೇಟ್
ಉದ್ಯಮಿಗಳು
ಸಹಾರಾ
ಸಂಸ್ಥೆಯಿಂದ
ಭೂಮಿ
ಕೊಳ್ಳಲು
ಮುಗಿ
ಬೀಳುತ್ತಿದ್ದಾರೆ.
ಸಹಾರಾ
ಮಾರಾಟದ
ಅಂಕಿ
ಅಂಶ:
*
ಗುರ್
ಗಾಂವ್
ನ
185
ಎಕರೆ
ಭೂಮಿ
ಎಂ3ಎಂ
ಇಂಡಿಯಾ
ಲಿಗೆ
ಮಾರಾಟ
*
ಮುಂದಿನ
ದಿನಗಳಲ್ಲಿ
ನಾಲ್ಕು
ಕಡೆಗಳಲ್ಲಿರುವ
ಭೂಮಿ
ಮಾರಾಟದಿಂದ
2,710
ಕೋಟಿ
ರು
ಸಹಾರಾ
ಕೈ
ಸೇರಲಿದೆ.
*
ಗುರ್
ಗಾವ್
ನ
ಚೌಮಾ,
ಜೋಧಪುರ,
ಪುಣೆ,
ಮುಂಬೈನ
ವಾಸೈ
ಪ್ರದೇಶ
ಭೂಮಿಗಳನ್ನು
ಸಹಾರಾ
ಮಾರಾಟಕ್ಕಿಟ್ಟಿದೆ.
*
ಮುಂಬೈನ
ಭೂಮಿಯಿಂದಲೇ
ಸುಮಾರು
1,111
ಕೋಟಿ
ರು
ಪಡೆಯುವ
ನಿರೀಕ್ಷೆಯಲ್ಲಿದೆ.
*
ಅಹಮದಾಬಾದಿನ
ಆಸ್ತಿ
ಮಾರಾಟದಿಂದ
411.82
ಕೋಟಿ
ರು
ಸಿಕ್ಕಿದೆ.
*
ಸೆಬಿಗೆ
ಈಗಾಗಲೇ
3,117
ಕೋಟಿ
ರು
ಜಮೆ
ಮಾಡಲಾಗಿದೆ.[ಸಹಾರಾ
ಮುಖ್ಯಸ್ಥನಿಗೆ
ರಿಲೀಫ್]
ಕಳೆದ
ಮಾರ್ಚ್
ತಿಂಗಳಿನಲ್ಲಿ
ತಿಹಾರ್
ಜೈಲಿನಲ್ಲಿದ್ದ
ಸಹಾರಾ
ಸಂಸ್ಥೆ
ಮುಖ್ಯಸ್ಥ
ಸುಬ್ರತಾ
ರಾಯ್
ಬಿಡುಗಡೆಯಾಗಿ
ಮಾರುಕಟ್ಟೆ
ನಿಯಂತ್ರಕ
ಸೆಬಿಯಲ್ಲಿ
ಸುಮಾರು
10.000
ಸಾವಿರ
ಕೋಟಿ
ರುಪಾಯಿಗಳನ್ನು
ಠೇವಣಿ
ಇಡುವಂತೆ
ಸುಪ್ರೀಂಕೋರ್ಟ್
ಆದೇಶಿಸಿದ್ದನ್ನು
ಇಲ್ಲಿ
ಸ್ಮರಿಸಬಹುದು.
ಸಹಾರಾ ಗೋಲ್ ಮಾಲ್ : ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.
2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.
ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ.