ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್‌ಟೆಲ್‌ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜುಲೈ 8: ಈ ಹಿಂದೆ ಸಲ್ಲಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್‌ಗಳನ್ನು ಸರಿಪಡಿಸುವ ಮೂಲಕ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ಗೆ 9.23 ಬಿಲಿಯನ್ ತೆರಿಗೆ ಮರುಪಾವತಿ ಪಡೆಯಲು ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ (ಎಸ್‌ಸಿ) ಮೆಟ್ಟಿಲೇರಿದೆ ಎಂದು ಬ್ಲೂಮ್‌ಬರ್ಗ್ ವರದಿಯೊಂದು ತಿಳಿಸಿದೆ.

ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಮೇ ತಿಂಗಳಲ್ಲಿ ಸುನಿಲ್ ಮಿತ್ತಲ್ ನೇತೃತ್ವದ ಟೆಲಿಕಾಂ ಕಂಪನಿಗೆ ಜುಲೈ ರಿಂದ ಸೆಪ್ಟೆಂಬರ್ 2017 ರ ಅವಧಿಗೆ ಜಿಎಸ್‌ಟಿ ಮರುಪಾವತಿ ಪಡೆಯಲು ಅವಕಾಶ ನೀಡಿತ್ತು.

ಕಳೆದ 1 ವಾರದಲ್ಲಿ 1.37 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಸಂಪಾದನೆ: ಟಾಪ್ 10 ಸಂಸ್ಥೆಗಳುಕಳೆದ 1 ವಾರದಲ್ಲಿ 1.37 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಸಂಪಾದನೆ: ಟಾಪ್ 10 ಸಂಸ್ಥೆಗಳು

ಭಾರ್ತಿ ಏರ್‌ಟೆಲ್ 2017 ರ ಜುಲೈನಿಂದ ಸೆಪ್ಟೆಂಬರ್ ವರೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಕಡಿಮೆ ವರದಿ ಮಾಡಿದೆ ಎಂದು ಅಧಿಕಾರಿಗಳು ಹೇಳಿಕೊಂಡರೆ, ದೋಷದ ಅವಧಿಯಲ್ಲಿ ಜಿಎಸ್‌ಟಿಆರ್-2 ಎ ಫಾರ್ಮ್ ಕಾರ್ಯನಿರ್ವಹಿಸದ ಕಾರಣ ಅಂದಾಜಿನ ಆಧಾರದ ಮೇಲೆ ಇನ್‌ಪುಟ್‌ಗಳ ಮೇಲೆ 9.23 ಬಿಲಿಯನ್ (923 ಕೋಟಿ) ಹೆಚ್ಚುವರಿ ತೆರಿಗೆಯನ್ನು ಪಾವತಿಸಿದೆ ಎಂದು ಟೆಲಿಕಾಂ ಕಂಪನಿ ಹೇಳಿದೆ.

Rs 9.23 Billion GST Refund Issue: Govt Moves SC Against Bharti Airtel

ದೆಹಲಿ ಹೈಕೋರ್ಟ್ ಈ ಮೇಲ್ಕಂಡತೆ ಜಿಎಸ್‌ಟಿ ಮರುಪಾವತಿ ಪಡೆಯಲು ಆದೇಶ ನೀಡಿರುವುದರಿಂದ, ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ, ಕೇಂದ್ರ ಸರ್ಕಾರವು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

English summary
The government has moved the Supreme Court (SC) against the Delhi High Court order allowing Bharti Airtel Ltd to claim ₹9.23 billion in tax refunds by rectifying its GST returns filed earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X