ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆ ಪ್ರಕರಣ ಬಿಜೆಪಿ ವಿರುದ್ಧದ ಕಾಂಗ್ರೆಸ್ ರಾಜಕೀಯ ಹೋರಾಟಕ್ಕೆ ವರವಾಗಿ ಪರಿಣಮಿಸಿದೆ.

ಊರ್ಜಿತ್ ಆರ್ ಬಿಐ ಸಂಸ್ಥೆಯನ್ನು ರಕ್ಷಿಸುತ್ತಿದ್ದ ಕಾರಣಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್

ನಿಮ್ಮನ್ನು ಉಳಿಸಿಕೊಳ್ಳಲು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಆರ್ ಬಿಐ ನಿಧಿಯನ್ನು ಕಿತ್ತುಕೊಳ್ಳಲು ಮುಂದಾಗಿದ್ದಿರಿ. ಅದರ ವಿರುದ್ಧ ಸೆಟೆದು ನಿಂತ ಎಲ್ಲ ಜೀವನ ಮತ್ತು ಸಂಸ್ಥೆಗಳ ಜನರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

RBI Governor Urjit Patel resignation rahul gandhi siddaramaiah reactions

ಪ್ರಧಾನಿ ಮೋದಿ ನೇಮಿಸಿದ ಜನರೆಲ್ಲರೂ ರಾಜೀನಾಮೆ ನೀಡುತ್ತಿದ್ದಾರೆ. ಮೊದಲು ಸಿಇಎ ಹುದ್ದೆಯಿಂದ ಅರವಿಂದ್ ಸುಬ್ರಮಣಿಯನ್ ನಿರ್ಗಮಿಸಿದರು. ಈಗ ಊರ್ಜಿತ್ ಪಟೇಲ್. ಆರ್ಥಿಕತೆ ಸೊರಗುತ್ತಿದೆ. ಮೋದಿ ತಾವೊಬ್ಬ ಮಹಾನ್ ಆರ್ಥಿಕತಜ್ಞ, ತಮಗೆ ಅವರಾರೂ ಬೇಡ ಎಂದು ಯೋಚಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆರೋಪಿಸಿದ್ದಾರೆ.

'ಊರ್ಜಿತ್ ಪಟೇಲ್ ರಾಜೀನಾಮೆ: ಚೌಕಿದಾರನ ಹಲ್ಲೆಯ ಪ್ರತಿಫಲ''ಊರ್ಜಿತ್ ಪಟೇಲ್ ರಾಜೀನಾಮೆ: ಚೌಕಿದಾರನ ಹಲ್ಲೆಯ ಪ್ರತಿಫಲ'

'ನರೇಂದ್ರ ಮೋದಿ ಅವರೇ, ಸಂಸ್ಥೆಗಳನ್ನು ಅಸ್ಥಿರಗೊಳಿಸುವುದು ನಿಮ್ಮ ಪ್ರಜ್ಞಾಪೂರ್ವಕ ಪ್ರಯತ್ನವೇ ಅಥವಾ ಆಡಳಿತವನ್ನು ಅರ್ಥಮಾಡಿಕೊಳ್ಳುವಲ್ಲಿನ ನಿಮ್ಮ ವೈಫಲ್ಯವೇ? ಎರಡೂ ರೀತಿಯಲ್ಲಿ ಜನರು ನಿಮ್ಮನ್ನು ಹೊರಕ್ಕೆ ಕಳುಹಿಸುವಂತೆ ಮತಚಲಾಯಿಸಲು ಇನ್ನಷ್ಟು ಕಾರಣಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

English summary
Congress President Rahul Gandhi and former Chief Minister Siddaramaiah reacted on RBI Governor Urjit Patel's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X