ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ದೇಶವನ್ನೇ ನಾಶ ಮಾಡಲಿದೆ: ರಾಹುಲ್ ಗಾಂಧಿ ವಾಗ್ದಾಳಿ

|
Google Oneindia Kannada News

Recommended Video

ಬಿಜೆಪಿ ದೇಶವನ್ನೇ ನಾಶ ಮಾಡಲಿದೆ | Oneindia Kannada

ನವದೆಹಲಿ, ಡಿಸೆಂಬರ್ 11: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯು ಆಧುನಿಕ ಭಾರತದ ಎಲ್ಲ ದೇವಸ್ಥಾನಗಳನ್ನು ಬಿಜೆಪಿ ಉರುಳಿಸಿದೆ ಎಂದು ಹರಿಹಾಯ್ದಿದ್ದಾರೆ.

ಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿ

ಊರ್ಜಿತ್ ಪಟೇಲ್ ರಾಜೀನಾಮೆ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಆರ್ ಬಿಐ ಗವರ್ನರ್ ಅವರ ರಾಜೀನಾಮೆಯೊಂದಿಗೆ ಮತ್ತೊಂದು ಸ್ವತಂತ್ರ ಸಂಸ್ಥೆ ಉರುಳಿದಂತಾಗಿದೆ ಎಂದು ಹೇಳಿದ್ದಾರೆ.

ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್

ಆಧುನಿಕ ಭಾರತದ ಎಲ್ಲ ದೇವಾಲಯಗಳನ್ನೂ ಬಿಜೆಪಿ ಉರುಳಿಸಿದೆ. ಇದು ಮುಂದುವರಿದರೆ ಬಿಜೆಪಿ ಭಾರತವನ್ನೇ ನಾಶಪಡಿಸುವುದು ಖಚಿತ ಎಂದು ರಾಹುಲ್ ಟೀಕಿಸಿದ್ದಾರೆ.

'ಊರ್ಜಿತ್ ಪಟೇಲ್ ರಾಜೀನಾಮೆ: ಚೌಕಿದಾರನ ಹಲ್ಲೆಯ ಪ್ರತಿಫಲ''ಊರ್ಜಿತ್ ಪಟೇಲ್ ರಾಜೀನಾಮೆ: ಚೌಕಿದಾರನ ಹಲ್ಲೆಯ ಪ್ರತಿಫಲ'

RBI Governor Urjit Patel resignation bjp will destroy india modern temples

ಆರ್ ಬಿಐ ಸಂಸ್ಥೆಯನ್ನು ರಕ್ಷಿಸುತ್ತಿದ್ದ ಕಾರಣಕ್ಕೆ ಅದರ ಗವರ್ನರ್ ರಾಜೀನಾಮೆ ನೀಡಬೇಕಾಗಿದೆ. ನಿಮ್ಮನ್ನು ಉಳಿಸಿಕೊಳ್ಳಲು ಆರ್ ಬಿಐ ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ದೇಶಕ್ಕೆ ವಿರುದ್ಧವಾದುದು ಎಂದು ರಾಹುಲ್ ಸೋಮವಾರ ಹೇಳಿದ್ದರು.

English summary
Congress President Rahul Gandhi slammed BJP over the resignation of RBI governor Urjit Patel. BJP has demolished every temple of modern india and if not stopped, will surely desroy India itself, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X