ಕರೂರ್ ವೈಶ್ಯ ಬ್ಯಾಂಕ್ನಲ್ಲಿ ಪಾಲನ್ನು ಹೆಚ್ಚಿಸಿಕೊಂಡ ರಾಕೇಶ್ ಜುಂಜುನ್ವಾಲಾ
ನವದೆಹಲಿ, ಜುಲೈ 27: ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಕರೂರ್ ವೈಶ್ಯ ಬ್ಯಾಂಕಿನಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದು, ಬ್ಯಾಂಕಿನ ಇತ್ತೀಚಿನ ಷೇರುದಾರರ ಮಾಹಿತಿಯಲ್ಲಿ ಬಹಿರಂಗವಾಗಿದೆ.
Recommended Video
ರಾಕೇಶ್ ಜುಂಜುನ್ವಾಲಾ ಅವರು ಜೂನ್ ತ್ರೈಮಾಸಿಕದಲ್ಲಿ ಕರೂರ್ ವೈಶ್ಯ ಬ್ಯಾಂಕಿನಲ್ಲಿ ತಮ್ಮ ಪಾಲನ್ನು ಶೇ. 4.5ರಷ್ಟು ಹೆಚ್ಚಿಸಿದ್ದಾರೆ, ಮಾರ್ಚ್ ತ್ರೈಮಾಸಿಕದಲ್ಲಿ ಇದು ಶೇ. 4.2ರಷ್ಟಿತ್ತು.
ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು
ಷೇರುದಾರರ ಮಾದರಿಯು ಕರೂರ್ ವೈಶ್ಯ ಬ್ಯಾಂಕಿನಲ್ಲಿ ಸುಮಾರು ಶೇ. 17ರಷ್ಟು ಪಾಲನ್ನು ಹೊಂದಿರುವ ಮ್ಯೂಚುವಲ್ ಫಂಡ್ಗಳನ್ನು ತೋರಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ. 21.11ರಷ್ಟಿದೆ.
ಸೆನ್ಸೆಕ್ಸ್ನಲ್ಲಿ ಶೇ. 0.4ರಷ್ಟು ಕುಸಿತಕ್ಕೆ ಹೋಲಿಸಿದರೆ ಕರೂರ್ ವೈಶ್ಯ ಬ್ಯಾಂಕಿನ ಷೇರುಗಳು ಇಂದು ಬಿಎಸ್ಇಯಲ್ಲಿ ಶೇ. 0.8ರಷ್ಟು ಏರಿಕೆ ಕಂಡಿತು, ಅಲ್ಲದೆ ಗರಿಷ್ಠ 31.90 ರುಪಾಯಿಗೆ ತಲುಪಿದೆ. ಬ್ಯಾಂಕಿನ ಷೇರುಗಳು 52 ವಾರಗಳ ಕನಿಷ್ಠ 18.15 ರಿಂದ ತೀವ್ರವಾಗಿ ಏರಿಕೆಯಾಗಿದ್ದು, ಈ ವರ್ಷದ ಮಾರ್ಚ್ನಲ್ಲಿ ಕುಸಿತ ಅನುಭವಿಸಿತ್ತು.
ಇತರ ಮೂಲಗಳಿಂದ ಹೆಚ್ಚಿನ ಆದಾಯದ ಮೇಲೆ ಮಾರ್ಚ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇ. 39.5 ರಷ್ಟು ಏರಿಕೆಗೊಂಡು 83.70 ಕೋಟಿಗೆ ತಲುಪಿದೆ. ಇದು 2018-19ರ ಇದೇ ಅವಧಿಯಲ್ಲಿ 60.02 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.
ಇತ್ತೀಚೆಗಷ್ಟೇ ರಮೇಶ್ ಬಾಬು ಬೊಡ್ಡು ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಕರೂರ್ ವೈಶ್ಯ ಬ್ಯಾಂಕ್ ಪ್ರಕಟಿಸಿದೆ.