ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆ 'ಬುಲೆಟ್ ಟ್ರೇನ್'ಗೆ ದೊಡ್ಡ ತಡೆ ಎದುರಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯು ಈ ರೈಲ್ವೆ ಜಾಲ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿದೆ. ರೈತರ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಇಂಥ ನಿರ್ಧಾರ ಮಾಡಲಾಗಿದೆ.

1 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡ ಭೂಮಿಗಾಗಿ ರೈತರಿಗೆ ಪರಿಹಾರ ನೀಡಲು ಸರಕಾರ ಆದ್ಯತೆ ಕೊಡಬೇಕು ಎಂದು ಜಪಾನ್ ನ ಏಜೆನ್ಸಿ ಹೇಳಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಧ್ಯೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಕೇಂದ್ರ ಸರಕಾರದಿಂದ ಈಗಾಗಲೇ ರೈತರ ಸಮಸ್ಯೆ ನಿವಾರಣೆಗಾಗಿಯೇ ವಿಶೇಷ ಸಮಿತಿ ರಚಿಸಲಾಗಿದೆ.

ಮೋದಿಯ ಬುಲೆಟ್‌ ಟ್ರೇನ್‌ಗೆ ಕೆಂಪು ಬಾವುಟ ತೋರಿಸಿದ ರೈತರುಮೋದಿಯ ಬುಲೆಟ್‌ ಟ್ರೇನ್‌ಗೆ ಕೆಂಪು ಬಾವುಟ ತೋರಿಸಿದ ರೈತರು

ಆದರೆ, ಈ ಸಮಸ್ಯೆ ಬಗೆಹರಿಸಲು ಹಣಕಾಸಿನ ಕೊರತೆ ಇದೆ. ಆ ಕಾರಣಕ್ಕೆ 2022ಕ್ಕೆ ಪೂರ್ಣಗೊಳ್ಳಬೇಕಾದ ಈ ಯೋಜನೆ ಮತ್ತಷ್ಟು ಸಮಯ ಮುಂದೆ ಹೋಗಲಿದೆ. ಹದಿನೈದು ವರ್ಷದ ಹಿಂದೆ ಆರಂಭವಾದ ಜಪಾನ್ ನ ಸರಕಾರಿ ಏಜೆನ್ಸಿ 'ಜಿಕಾ', ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಲ್ಲಿನ ಸರಕಾರಕ್ಕೆ ನೆರವು ನೀಡುತ್ತದೆ.

ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ಸಮಸ್ಯೆ

ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ಸಮಸ್ಯೆ

ಅಂತರರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕ ವ್ಯವಸ್ಥೆಗೆ ಬೆಂಬಲ ನೀಡುವುದು, ಅಭಿವೃದ್ಧಿ ಆಗುತ್ತಿರುವ ಪ್ರದೇಶಗಳ ಆರ್ಥಿಕ ಸ್ಥಿರತೆಗಾಗಿ ಶ್ರಮಿಸುವುದು ಈ ಏಜೆನ್ಸಿಯ ಉದ್ದೇಶವಾಗಿದೆ. ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾಗಿದೆ.

ಹೆಚ್ಚಿನ ಪರಿಹಾರ, ಮೂಲಸೌಕರ್ಯಕ್ಕೆ ರೈತರ ಆಗ್ರಹ

ಹೆಚ್ಚಿನ ಪರಿಹಾರ, ಮೂಲಸೌಕರ್ಯಕ್ಕೆ ರೈತರ ಆಗ್ರಹ

ರೈತರು ಹೆಚ್ಚಿನ ಪರಿಹಾರ ಹಾಗೂ ಹಳ್ಳಿಗಾಡು ಪ್ರದೇಶದಲ್ಲಿ ಕೆಲವು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. 508 ಕಿಲೋಮೀಟರ್ ಈ ರೈಲು ಕಾರಿಡಾರ್ ಪೈಕಿ 110 ಕಿಲೋಮೀಟರ್ ಮಹಾರಾಷ್ಟ್ರದ ಪಲ್ಘರ್ ಮೂಲಕ ಹಾದುಹೋಗುತ್ತದೆ. ಇಲ್ಲಿ ರೈತರಿಂದ ಭಾರೀ ಸವಾಲು ಎದುರಾಗಿದೆ. ಗುಜರಾತ್ ನಲ್ಲೂ 850 ಹೆಕ್ಟೇರ್ ಪ್ರದೇಶ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಎಂಟು ಜಿಲ್ಲೆಗಳ 5 ಸಾವಿರ ಕುಟುಂಬಗಳು ಈ ವ್ಯಾಪ್ತಿಯಲ್ಲಿವೆ.

ಬುಲೆಟ್ ರೈಲು ಯಾಕೆ ಬೇಕು? ರೈಲ್ವೆ ಸಚಿವರ ಉತ್ತರಬುಲೆಟ್ ರೈಲು ಯಾಕೆ ಬೇಕು? ರೈಲ್ವೆ ಸಚಿವರ ಉತ್ತರ

ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ ರೈತರು

ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ ರೈತರು

ಗುಜರಾತ್ ನ ಕೆಲ ರೈತರು ಈ ಯೋಜನೆ ಬಗ್ಗೆ ಕೆಲವು ಆಕ್ಷೇಪ ವ್ಯಕ್ತಪಡಿಸಿ, ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಜಪಾನ್ ನ 'ಜಿಕಾ' ಹಣಕಾಸಿನ ನೆರವು ನಿಲ್ಲಿಸುವ ಘೋಷಣೆ ಮಾಡಿದೆ. ಜತೆಗೆ ಈ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ರೈತರ ಸಮಸ್ಯೆ ನಿವಾರಿಸುವ ತನಕ ಸರಕಾರಕ್ಕೆ ಹಣಕಾಸಿನ ನೆರವು ನೀಡಬಾರದು ಎಂದು ಕೋರಿ ರೈತರು 'ಜಿಕಾ'ಗೆ ಪತ್ರ ಬರೆದಿದ್ದಾರೆ.

ಈ ತನಕ 125 ಕೋಟಿ ಮಾತ್ರ ಬಿಡುಗಡೆ

ಈ ತನಕ 125 ಕೋಟಿ ಮಾತ್ರ ಬಿಡುಗಡೆ

ಇಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕೆ ಜಪಾನ್ ನಿಂದ ಒಬ್ಬರನ್ನು ರಾಯಭಾರಿಯಾಗಿ ಕಳುಹಿಸಿ ಎಂದು ಕೇಳಿಕೊಳ್ಳಲಾಗಿದೆ. ಈ ಯೋಜನೆಗಾಗಿ ಈ ವರೆಗೆ ಜಿಕಾದಿಂದ 125 ಕೋಟಿ ಬಿಡುಗಡೆ ಮಾಡಲಾಗಿದೆ. 1 ಲಕ್ಷ ಕೋಟಿ ರುಪಾಯಿಯ ಈ ಯೋಜನೆಗೆ ಜಿಕಾ 80 ಸಾವಿರ ಕೋಟಿ ನೆರವು ನೀಡುವ ಭರವಸೆ ನೀಡಿತ್ತು.

ಬುಲೆಟ್ ಟ್ರೈನ್ ಯೋಜನೆ: ತಿಳಿಯಬೇಕಾದ 10 ಸಂಗತಿಬುಲೆಟ್ ಟ್ರೈನ್ ಯೋಜನೆ: ತಿಳಿಯಬೇಕಾದ 10 ಸಂಗತಿ

English summary
In a first major hurdle in Prime Minister Narendra Modi's dream Bullet train project - the Japan International Cooperation Agency (JICA) has stopped funding for the construction of the railway network, citing farmers issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X