ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರು. ಗೆ ಕೆಜಿ, ರೈತನ ಕಣ್ಣಲ್ಲಿ ನೀರು ಹಾಕಿಸುತ್ತಿರುವ ಈರುಳ್ಳಿ

By Madhusoodhan
|
Google Oneindia Kannada News

ನವದೆಹಲಿ, ಆಗಸ್ಟ್, 29: ಈ ಬಾರಿ ಈರುಳ್ಳಿ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ನಿರೀಕ್ಷೆಗೆ ಮೀರಿದ ಇಳುವರಿಯಿಂದಾಗಿ ಈರುಳ್ಳಿ ಬೆಲೆ ಕುಸಿದಿದೆ.

ಕಳೆದ ವರ್ಷ ಮತ್ತು ಅದಕ್ಕೂ ಹಿಂದಿನ ವರ್ಷ ಬಂಗಾರದ ಬೆಲೆ ದಾಖಲು ಮಾಡಿದ್ದ ಈರುಳ್ಳಿಯನ್ನು ಈಗ ಕೇಳುವವರಿಲ್ಲವಾಗಿದೆ. ವ್ಯಾಪಾರಿಗಳು ಕ್ವಿಂಟಾಲ್ ಈರುಳ್ಳಿಯನ್ನು 5 ರು. ಗೆ ಕೇಳುತ್ತಿದ್ದಾರೆ ಎಂದು ಮಹಾರಾಷ್ಟ್ರದ ಬೆಳೆಗಾರ ಸುಧಾಕರ್ ದಾರಡೆ ಪರಿಸ್ಥಿತಿಯ ವಿವರಣೆ ನೀಡುತ್ತಾರೆ.[ಬಂಗಾರದ ಬೆಲೆ ಬಂದಾಗ ಸಾಮಾಜಿಕ ತಾಣದಲ್ಲಿ ಹರಿದಾಡಿದ್ದ ಈರುಳ್ಳಿ]

onion

ಮಹಾರಾಷ್ಟ್ರದ ಲಾಸಲ್‌ಗಾಂವ್‌ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ ದರ 6 ರು. ಗೆ ಕುಸಿದಿದೆ.ಕಳೆದ ವರ್ಷ ಇದೇ ಅವಧಿವೇಳೆ 48 ರು. ವಹಿವಾಟು ನಡೆಸುತ್ತಿದ್ದ ಈರುಳ್ಳಿ ರೈತನ ಕಣ್ಣಲ್ಲಿ ನೀರು ಹಾಕಿಸುತ್ತಿದೆ.[ಏರ್ ಟೆಲ್ ಸಿಮ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ!]

ಪರಿಹಾರ ಕ್ರಮವಾಗಿ ತಾಜಾ ಮತ್ತು ಸಂಗ್ರಹಿಸಿಟ್ಟ ಈರುಳ್ಳಿ ರಫ್ತಿನ ಮೇಲೆ ಶೇ. 5 ರ ಸುಂಕ ವಿನಾಯಿತಿ ನೀಡಿಕೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕಳೆದ ವರ್ಷ ಶತಕದ ಗಡಿ ಸಮೀಪಿಸಿದ್ದ ಈರುಳ್ಳಿ ಗ್ರಾಹಕನ ಕಣ್ಣಲ್ಲಿ ನೀರು ಹಾಕಿಸಿತ್ತು. ಈ ಬಾರಿ ಬೆಳೆಗಾರನ ಸರದಿ. ಖರ್ಚು ಮಾಡದ ವೆಚ್ಚ ಇರಲಿ ಕೆಲಸ ಮಾಡಿಸಿದ ಕೂಲಿಯೂ ಸಿಗಲ್ಲ ಎಂಬ ಕಾರಣಕ್ಕೆ ರೈತರು ಈರುಳ್ಳಿ ಸಂಸ್ಕರಣೆಯನ್ನು ಕೈಬಿಡುತ್ತಿದ್ದಾರೆ.

English summary
With a bumper crop in the offing, rising onion arrivals are causing major concern to farmers who are being forced to sell the commodity at prices as low as Rs 3-5 per kg in some parts of Maharashtra. This time, farmer organisations are up in arms against falling onion prices and have decided to come onto streets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X