ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಗುಂಜನ್ ಆಹ್ವಾನ
ನವದೆಹಲಿ, ಜುಲೈ 31: "ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ" ಎಂದು ರಾಜ್ಯ ಸರ್ಕಾರದ ಕೈಗಾರಿಕಾಭಿವೃದ್ಧಿ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ 18 ನೇ ಭಾರತ-ತೈವಾನ್ ಜಂಟಿ ವಾಣಿಜ್ಯ ಸಹಕಾರ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಕೈಗಾರಿಕಾ ಕ್ಲಸ್ಟರ್ ಅನ್ನು ಪ್ರಮುಖವಾಗಿ ಜಾರಿಗೆ ತರಲಾಗುತ್ತಿದೆ. 9 ಜಿಲ್ಲೆಗಳಲ್ಲಿ 9 ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡುವಂತಹ ಕ್ಲಸ್ಟರ್ಗಳನ್ನು ರೂಪಿಸಲಾಗಿದ್ದು, ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ಎಲೆಕ್ಟ್ರಿಕ್ ವೆಹಿಕಲ್ಸ್ ಅಂಡ್ ಡಿಫೆನ್ಸ್ ಇಕ್ವಿಪ್ಮೆಂಟ್ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ ಅವರು, "ಈ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳಿಗಾಗಿ ಬಂಡವಾಳ ಹೂಡಿಕೆಗೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾಗಿ ಮೂಲಸೌಕರ್ಯ, ಸಿದ್ಧಉಡುಪುಗಳ ಶೆಡ್ಗಳು, ಕೌಶಲ್ಯಾಭಿವೃದ್ಧಿ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶವನ್ನು ಕಲ್ಪಿಸಲಾಗಿದೆ" ಎಂದು ತಿಳಿಸಿದರು.
ತೈವಾನ್ನ
ರಾಯಭಾರಿ
ಮತ್ತು
ಭಾರತದಲ್ಲಿ
ಆರ್ಥಿಕ
ಮತ್ತು
ಸಾಂಸ್ಕøತಿಕ
ಕೇಂದ್ರದ
ಪ್ರತಿನಿಧಿ
ಅಂಬ್
ತಿಯಾನ್
ಚುಂಗ್-ಕ್ವಾಂಗ್
ಅವರು
ಈ
ಸಮ್ಮೇಳನವನ್ನು
ಉದ್ಘಾಟಿಸಿದರು.
ಈ
ಸಮ್ಮೇಳನದಲ್ಲಿ
ತೈವಾನ್
ಮತ್ತು
ಭಾರತದ
ಪ್ರಮುಖ
ವಾಣಿಜ್ಯೋದ್ಯಮಿಗಳು
ಕೈಗಾರಿಕೆ
ಮತ್ತು
ವಾಣಿಜ್ಯಕ್ಕೆ
ಸಂಬಂಧಿಸಿದಂತೆ
ಉಭಯ
ದೇಶಗಳ
ನಡುವಿನ
ವಾಣಿಜ್ಯ
ವ್ಯವಹಾರಗಳ
ಸಹಕಾರದ
ಬಗ್ಗೆ
ಪರಸ್ಪರ
ಮಾತುಕತೆ
ನಡೆಸಿದರು.
"ಭಾರತದಲ್ಲಿ ಬಂಡವಾಳ ತೊಡಗಿಸಲು ತೈವಾನ್ನ ಕೈಗಾರಿಕೋದ್ಯಮಿಗಳು ಸದಾ ಉತ್ಸುಕರಾಗಿದ್ದಾರೆ. ಈ ಪ್ರದೇಶದಲ್ಲಿನ ಅವಕಾಶಗಳನ್ನು ಅರಿತಿರುವ ಉದ್ಯಮಿಗಳು ಇದೀಗ ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಇದೇ ವೇಳೆ, ಭಾರತ ಸರ್ಕಾರವು ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ" ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ತೈವಾನ್ ದೇಶದ 40 ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ವೆಹಿಕಲ್ಸ್, ಎಫ್ಎಂಸಿಜಿ ಎಲೆಕ್ಟ್ರಾನಿಕ್ಸ್, ಗ್ರೀನ್ ಎನರ್ಜಿ ಕ್ಷೇತ್ರದ ಕಂಪನಿಗಳು ಪಾಲ್ಗೊಂಡಿದ್ದವು. ವಿಸ್ಟ್ರಾನ್, ಕ್ರೋಮಾ, ಏಟ್ ಇಂಕ್, ಸಿನ್ಪ್ರೊ, ಯೂಸುನ್ ಹೋಲ್ಡಿಂಗ್ ಕಾರ್ಪೊರೇಶನ್ ಸೇರಿದಂತೆ ಹಲವು ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆ ಕ್ಲಸ್ಟರ್ಗಳ ಅಭಿವೃದ್ಧಿ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ.