ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ:ಆರ್ಬಿಐ
ನವದೆಹಲಿ, ಜುಲೈ 11: ಕೊರೊನಾವೈರಸ್ದಿಂದಾಗಿ ಭಾರೀ ಪೆಟ್ಟು ತಿಂದಿರುವ ಭಾರತದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದು, ಶೀಘ್ರದಲ್ಲೇ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
Recommended Video
ಶನಿವಾರ ನಡೆದ 7 ನೇ ಎಸ್ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಕಾನ್ಕ್ಲೇವ್ನಲ್ಲಿ ಭಾಗವಹಿಸಿದ್ದ ಶಕ್ತಿಕಾಂತ ದಾಸ್ , ಭಾರತದ ಆರ್ಥಿಕತೆಯು ಕ್ರಮೇಣ ಸಹಜ ಸ್ಥಿತಿಗೆ ಮರಳುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದಾಗಿನಿಂದ ಆರ್ಥಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳಿವೆ ಎಂದು ಅವರು ಹೇಳಿದರು.
ಭಾರತದಲ್ಲಿ 100 ವರ್ಷಗಳಲ್ಲೇ ಅತಿ ಕೆಟ್ಟ ಆರ್ಥಿಕ ಪರಿಸ್ಥಿತಿ: ಆರ್ಬಿಐ ಗವರ್ನರ್
ವಿಶೇಷವೆಂದರೆ, ಕೊರೊನಾವೈರಸ್ನಿಂದಾಗಿ, ಲಾಕ್ಡೌನ್ 2 ತಿಂಗಳಿಗಿಂತ ಹೆಚ್ಚು ಕಾಲ ದೇಶಾದ್ಯಂತ ಜಾರಿಯಲ್ಲಿದೆ. ಇದರಿಂದಾಗಿ ಭಾರತದ ಆರ್ಥಿಕತೆಯು ಬಹಳವಾಗಿ ನರಳಿದೆ. ಆದಾಗ್ಯೂ, ಲಾಕ್ಡೌನ್ನಿಂದ ಅನ್ಲಾಕ್ ಮಾಡುವ ಪ್ರಕ್ರಿಯೆಯಿಂದ, ದೇಶದ ಜಿಡಿಪಿ ಮತ್ತೊಮ್ಮೆ ವೇಗವನ್ನು ಹಿಡಿಯಲು ಪ್ರಾರಂಭಿಸಿದೆ ಎಂದಿದ್ದಾರೆ.
"ಪ್ರಸ್ತುತ ಸಮಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಬೆಳವಣಿಗೆಯ ದರವನ್ನು ವೇಗಗೊಳಿಸುವುದು ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸುವುದು ಅಗತ್ಯವಾಗಿದೆ, ಇದರಿಂದ ನಾವು ಬಲವಾಗಿ ಮರಳಬಹುದು" ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
ಲಾಕ್ಡೌನ್ ಸಡಿಲಗೊಂಡ ನಂತರ ಭಾರತೀಯ ಆರ್ಥಿಕತೆಯು ಈಗ ಸಹಜ ಸ್ಥಿತಿಗೆ ಮರಳಲು ಸಂಕೇತ ನೀಡುತ್ತಿದೆ ಎಂದು ಶಕ್ತಿಕಾಂತ ಹೇಳಿದರು. ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಕಂಪನಿಗಳು ಮತ್ತು ಕೈಗಾರಿಕೆಗಳು ಉತ್ತಮವಾಗಿ ಪ್ರತಿಕ್ರಿಯಿಸಿವೆ. ಆದರೆ, ಕೊರೊನಾವೈರಸ್ 100 ವರ್ಷಗಳಲ್ಲಿ ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕೋವಿಡ್-19 ಭಾರತವನ್ನು ಮಾತ್ರವಲ್ಲದೆ ವಿಶ್ವ ಆರ್ಥಿಕತೆ, ಜಾಗತಿಕ ಮೌಲ್ಯ ಸರಪಳಿ ಮತ್ತು ಕಾರ್ಮಿಕ ಮತ್ತು ಬಂಡವಾಳ ಚಳುವಳಿಯನ್ನೂ ದುರ್ಬಲಗೊಳಿಸಿದೆ ಎಂದು ಅವರು ಹೇಳಿದರು. ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ಹಣ ಸಂಗ್ರಹಿಸುವಂತೆ ಸಲಹೆ ನೀಡಿದ್ದಾರೆ.