ಭಾರತೀಯ ಆರ್ಥಿಕತೆಯ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ: ಆರ್ಬಿಐ ಗವರ್ನರ್
ನವದೆಹಲಿ, ನವೆಂಬರ್ 26: ದೇಶದ ಆರ್ಥಿಕತೆ ಮತ್ತೆ ತನ್ನ ಹಾದಿಗೆ ಮರಳುತ್ತಿದ್ದು, ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಆರಂಭಿಕ ಪರಿಣಾಮವು ದೇಶದ ಆರ್ಥಿಕತೆಯನ್ನು ನಿರೀಕ್ಷೆಗಿಂತ ಬಲಪಡಿಸಿದೆ ಎಂದಿದ್ದಾರೆ. ಆದರೆ ಹಬ್ಬದ ಋತುವಿನ ಅಂತ್ಯದ ನಂತರ ಬೇಡಿಕೆಯ ಸ್ಥಿರತೆಯನ್ನು ಮೇಲ್ವಿಚಾರಣೆ ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಕಾರ್ಪೋರೇಟ್ NBFCಗಳನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಯೋಜನೆಗೆ ರಘುರಾಮ್ ರಾಜನ್ ವಿರೋಧ
ವಿದೇಶಿ ವಿನಿಮಯ ಮಾರಾಟಗಾರರ ಸಂಘದ (FEDAI) ನಾಲ್ಕನೇ ವಾರ್ಷಿಕ ದಿನದ ಸಮಾರಂಭದಲ್ಲಿ ಮಾತನಾಡಿದ ದಾಸ್, ಭಾರತ ಸೇರಿದಂತೆ ವಿಶ್ವದಾದ್ಯಂತ ಬೆಳವಣಿಗೆಗೆ ತೊಂದರೆಯುಂಟಾಗುತ್ತದೆ ಎಂದು ಹೇಳಿದರು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಶೇಕಡಾ 23.9 ರಷ್ಟು ಸಂಕೋಚನ ಕಂಡುಬಂದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇಕಡಾ 9.5 ರಷ್ಟು ಬೆಳವಣಿಗೆಯ ದರವನ್ನು ಕಾಣಬಹುದು ಎಂದು ಆರ್ಬಿಐ ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯಲ್ಲಿ ಶೇಕಡಾ 23.9ರಷ್ಟು ತೀವ್ರ ಸಂಕೋಚನದ ನಂತರ ಮತ್ತು ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಯನ್ನು ಸಾಮಾನ್ಯಗೊಳಿಸಿದ ನಂತರ ಭಾರತೀಯ ಆರ್ಥಿಕತೆಯು ನಿರೀಕ್ಷೆಗಿಂತ ಹೆಚ್ಚು ಬಲವಾದ ಚೇತರಿಕೆ ತೋರಿಸಿದೆ ಎಂದು ದಾಸ್ ಹೇಳಿದರು. ಈ ಸಮಯದಲ್ಲಿ ಅವರು ಹಬ್ಬಗಳ ನಂತರ ಬೇಡಿಕೆಯ ಸ್ಥಿರತೆ ಮತ್ತು ಲಸಿಕೆಗಳ ಸುತ್ತ ಮಾರುಕಟ್ಟೆಯ ನಿರೀಕ್ಷೆಗಳ ಮರು ಮೌಲ್ಯಮಾಪನದ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು.
ಆದರೆ ಯುರೋಪ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಮರುಕಳಿಸುವುದರಿಂದ ಬೆಳವಣಿಗೆಯ ತೊಂದರೆಯು ಮುಂದುವರಿಯುತ್ತದೆ ಎಂದಿದ್ದಾರೆ.