ಪಿಂಚಣಿ ಪಡೆಯಲು ಉದ್ಯೋಗದಾತರ ಅಪ್ಪಣೆ ಬೇಕಿಲ್ಲ
ನವದೆಹಲಿ, ಆಗಸ್ಟ್ , 19: ಕೇಂದ್ರ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಗೆ ಸಂಬಂಧಿಸಿದ 10-ಡಿ ಫಾರ್ಮ್ ಸರಳೀಕರಣಗೊಳಿಸಿದೆ.
ಇನ್ನು ಮುಂದೆ ಉದ್ಯೋಗದಾತರ(ಎಂಪ್ಲಾಯರ್) ದೃಢೀಕರಣ ಪಡೆಯದೇ ವಂತಿಗೆದಾರರು( ಎಂಪ್ಲಾಯ್) ತಮ್ಮ ಪಿಂಚಣಿ ಮೊತ್ತವನ್ನು ನಿಗದಿಪಡಿಸಬಹುದಾಗಿದೆ. 1995ರ ಪಿಂಚಣಿ ಯೋಜನೆ ಪ್ರಕಾರ, ವಂತಿಗೆದಾರರು ಪಿಂಚಣಿ ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರ ದೃಢೀಕರಣ ಪಡೆದು ಸಲ್ಲಿಸಬೇಕಿತ್ತು. ಆದರೆ ಈಗ ಇದು ಮತ್ತಷ್ಟು ಸುಲಭವಾಗಲಿದೆ.[ದಿನಗೂಲಿ ಪರಿಷ್ಕರಣೆಗೆ ಮುಂದಾದ ಕೇಂದ್ರ ಸರ್ಕಾರ|]
ಎಂಪ್ಲಾಯ್ಸ್ ಪ್ರಾವಿಡೆಂಡ್ ಫಂಡ್ ಆರ್ಗನೈಜೇಶನ್ (ಇಪಿಎಫ್ ಒ) ತಿಳಿಸಿದೆ. ಭವಿಷ್ಯನಿಧಿ ಸದಸ್ಯತ್ವ ಪಡೆದಿದ್ದ ಕಾರ್ಮಿಕರು ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಯುಎಎನ್ ಜತೆಗೆ ಸೇರ್ಪಡೆಗೊಳಿಸಿ, ಉದ್ಯೋಗದಾತರ ದೃಢೀಕರಣದೊಂದಿಗೆ ಇಪಿಎಫ್ ಗೆ ಸಲ್ಲಿಕೆ ಮಾಡಬೇಕಿತ್ತು.[ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]
ಹೊಸ ನೀತಿ ಈ ಉದ್ಯೋಗದಾತರ ಒಪ್ಪಿಗೆ ಪಡೆಯುವುದಕ್ಕೆ ಅಂತ್ಯ ಹಾಡಲಿದ್ದು ನೇರವಾಗಿ ಸಲ್ಲಿಕೆ ಮಾಡುವ ಅವಕಾಶವನ್ನು ಕೊಡಮಾಡುತ್ತಿದೆ. ಹೊಸ ಯೋಜನೆ 7.34 ಕೋಟಿ ಸದಸ್ಯರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.