ಕೊರೊನಾ ಸಂಕಷ್ಟ: 10 ಸಾವಿರ ಕೋಟಿ ನೆರವು ಕೇಳಿದ ಎನ್ಬಿಎಫ್ಸಿ
ನವದೆಹಲಿ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಆರ್ಥಿಕತೆಯ ಸಂದರ್ಭದಲ್ಲಿ ವಿಶೇಷ ನಗದು ಯೋಜನೆಯಡಿಯಲ್ಲಿ(Special Liquidity scheme) 10,000 ಕೋಟಿ ನೆರವು ನೀಡುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈ ಯೋಜನೆಯನ್ನು ಜುಲೈ 1 ರಂದು ಪ್ರಾರಂಭಿಸಲಾಯಿತು. ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (ಎಸ್ಬಿಐಸಿಎಪಿ) ಸ್ಥಾಪಿಸಿದ ಟ್ರಸ್ಟ್ ಹೊರಡಿಸಿದ ಸರ್ಕಾರಿ ಖಾತರಿಯ ವಿಶೇಷ ಭದ್ರತೆಗಳಿಗೆ ಚಂದಾದಾರರಾಗುವ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಯೋಜನೆಗೆ ಹಣವನ್ನು ಒದಗಿಸಲಿದೆ.
ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ:ಆರ್ಬಿಐ
ಈಗಾಗಲೇ 9,875 ಕೋಟಿ ನೆರವು ನೀಡುವಂತೆ 'ಎಸ್ಬಿಐ ಸಿಎಪಿ'ಗೆ ಜುಲೈ 7ರಂದು 24 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲು ಬಂದ ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದು, ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.