ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಪಿಂಕ್ ಸ್ಲಿಪ್, ಇದು ದುಃಖಕರ ಎಂದ ಇನ್ಫಿ ಮೂರ್ತಿ

|
Google Oneindia Kannada News

ಬೆಂಗಳೂರು, ಮೇ 26 : ಇದು ದುಃಖಕರ ಎಂದಿದ್ದಾರೆ ಇನ್ ಫೋಸಿಸ್ ನ ಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಐಟಿ ಕಂಪೆನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಕ್ಕೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ಇ ಮೇಲ್ ಮೂಲಕ ಪ್ರತಿಕ್ರಿಯಿಸಿರುವ ನಾರಾಯಣ ಮೂರ್ತಿ, ಇಂಥ ಘಟನೆ ದುಃಖಕರ ಎಂದಿದ್ದಾರೆ. ಇನ್ ಫೋಸಿಸ್ ನಲ್ಲಿ ನೂರಾರು ಮಂದಿ ಮಧ್ಯಮ ಹಂತ ಹಾಗೂ ಹಿರಿಯ ಅಧಿಕಾರಿಗಳಿಗೆ ಪಿಂಕ್ ಸ್ಲಿಪ್ ನೀಡುವುದಾಗಿ ಘೋಷಣೆ ಮಾಡಿದೆ.

After IT Companies Lays Off Thousands, Narayana Murthy Expresses Sadness

ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಇತರ ಐಟಿ ಕಂಪೆನಿಗಳಾದ ವಿಪ್ರೋ ಹಾಗೂ ಕಾಗ್ನಿಜಂಟ್ ಕೂಡ ಇದೇ ಹಾದಿಯನ್ನು ತುಳಿದಿವೆ. ಅಮೆರಿಕ ಮೂಲದ ಕಾಗ್ನಿಜಂಟ್ ಕಂಪೆನಿಯು ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಹಿರಿಯ ಉಪಾಧ್ಯಕ್ಷರಿಗೆ ಸ್ವಯಂ ಆಗಿ ಕೆಲಸ ಬಿಡಲು ಆರರಿಂದ ಒಂಬತ್ತು ತಿಂಗಳ ವೇತನ ಪಾವತಿಸುವುದಾಗಿ ಘೋಷಿಸಿದೆ.

ವಾರ್ಷಿಕ ಮೌಲ್ಯಮಾಪನದ ನೆಪದಲ್ಲಿ ಆರುನೂರು ಉದ್ಯೋಗಿಗಳನ್ನು ಕೆಲಸ ಬಿಡುವಂತೆ ವಿಪ್ರೋದಲ್ಲಿ ಸೂಚಿಸಲಾಗಿದೆ. ಈ ಸಂಖ್ಯೆ ಎರಡು ಸಾವಿರದವರೆಗೆ ಏರಿಕೆ ಆಗಬಹುದು ಎಂಬ ಅಂದಾಜಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಉಳಿದಿರುವ ಕಾರಣಕ್ಕೆ ಮುಂದಿನ ಮೂರುವರ್ಷದಲ್ಲಿ ಐಟಿ ವಲಯದಲ್ಲಿ ವರ್ಷಕ್ಕೆ 1.75ರಿಂದ 2 ಲಕ್ಷ ಕೆಲಸ ಕಡಿತವಾಗಲಿದೆ ಎಂದು ಅಂದಾಜಿದೆ.

English summary
Founder Chairman of Infosys N R Narayana Murthy on Friday expressed sadness over the IT companies laying off their employees as part of cost cutting strategy. "...It is sad...," Mr Murthy told in an email reply to a PTI query about recent IT layoffs. Mr Murthy, however, did not elaborate on the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X