41ನೇ ಜಿಎಸ್ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ
ನವದೆಹಲಿ, ಆಗಸ್ಟ್ 27: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ 41 ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ಟಿ ಆದಾಯ ಕುಸಿತ ಸೇರಿದಂತೆ ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಪರಿಹಾರದ ಕುರಿತು ಚರ್ಚಿಸಲಾಯಿತು.
ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಜಿಎಸ್ಟಿ ಸಂಗ್ರಹದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಜಿಎಸ್ಟಿ ಪರಿಹಾರ ಕಾನೂನಿನ ಪ್ರಕಾರ, ರಾಜ್ಯಗಳಿಗೆ ಪರಿಹಾರವನ್ನು ನೀಡಬೇಕಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದರು.
ಇದೇ ವೇಳೆ ಮಾರ್ಚ್ ತಿಂಗಳಿಗೆ 13,806 ಕೋಟಿ ರೂ. ಸೇರಿದಂತೆ 2019-20ನೇ ಸಾಲಿನಲ್ಲಿ ರಾಜ್ಯಗಳಿಗೆ ಜಿಎಸ್ಟಿ ಪರಿಹಾರವಾಗಿ ಕೇಂದ್ರ ಸರ್ಕಾರ 1.65 ಲಕ್ಷ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಆದರೆ ಸಂಗ್ರಹಿಸಿದ ಸೆಸ್ ಮೊತ್ತ 95,444 ಕೋಟಿ ರೂಪಾಯಿ ಎಂದು ಹಣಕಾಸು ಕಾರ್ಯದರ್ಶಿ ವಿವರಿಸಿದ್ದಾರೆ.
ಜುಲೈ 2017 ರಿಂದ ಜೂನ್ 2022 ರವರೆಗೆ ಪರಿವರ್ತನೆಯ ಅವಧಿಗೆ ಜಿಎಸ್ಟಿ ಪರಿಹಾರವನ್ನು ಪಾವತಿಸಬೇಕಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದರು. ಸೆಸ್ ನಿಧಿಯಿಂದ ಆದಾಯವನ್ನು ಸರಿದೂಗಿಸಬೇಕಾದ ಪರಿಹಾರದ ಅಂತರವನ್ನು ರಕ್ಷಿಸಬೇಕಾಗಿದೆ. ಇದಕ್ಕೆ ಪ್ರತಿಯಾಗಿ ಸೆಸ್ ವಿಧಿಸುವುದರಿಂದ ಹಣವನ್ನು ಪಡೆಯಬೇಕಾಗಿದೆ ಎಂದು ಹೇಳಲಾಗಿದೆ.
ಇನ್ನು ಈ ವರ್ಷ ಉಂಟಾದ ಪರಿಹಾರದ ಅಂತರಕ್ಕೆ (2.35 ಲಕ್ಷ ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ), ಕೋವಿಡ್-19 ಕಾರಣವೂ ಆಗಿದೆ. ಜಿಎಸ್ಟಿ ಅನುಷ್ಠಾನದಿಂದಾಗಿ ಪರಿಹಾರದ ಕೊರತೆ 97,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಹೀಗಾಗಿ ರಾಜ್ಯಗಳು ಜಿಎಸ್ಟಿ ಪರಿಹಾರವನ್ನು ನಿರ್ಧರಿಸಲು ಏಳು ದಿನಗಳನ್ನು ತೆಗೆದುಕೊಂಡಿವೆ. ಮೊದಲ ಆಯ್ಕೆಯು ಸಾಲವನ್ನು ಪಡೆಯುವಲ್ಲಿ ಆರ್ಬಿಐ ಮೂಲಕ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವುದು ಮತ್ತು ಎರಡನೆಯದು ಕೋವಿಡ್-19 ರೂಪದಲ್ಲಿ ದೇವರ ಅಸಾಧಾರಣ ಪರಿಸ್ಥಿತಿ ಮತ್ತು ಕಾಯಿದೆಯ ಕಾರಣದಿಂದಾಗಿ ಪರಿಹಾರದಲ್ಲಿ ಉಂಟಾಗುವ ಅಂತರ.
ಇದೇ ವೇಳೆಯಲ್ಲಿ ತೆರಿಗೆ ದರ ಹೆಚ್ಚಳ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಜಿಎಸ್ಟಿ ಕೌನ್ಸಿಲ್ ಒಪ್ಪಿಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್ಟಿ ದರ ಇಳಿಕೆಯು ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.