ಏ.22, 23ರಂದು ಯಶವಂತಪುರ-ಬೀದರ್ ನಡುವೆ ವಿಶೇಷ ರೈಲು
ಬೀದರ್, ಏಪ್ರಿಲ್ 19 : ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಬೇಸಿಗೆ ವಿಶೇಷ ರೈಲನ್ನು ಪ್ರಕಟಿಸಿದೆ. ಯಶವಂತಪುರ-ಬೀದರ್ ನಡುವೆ ಈ ರೈಲು ಸಂಚಾರ ನಡೆಸಲಿದೆ.
ಏಪ್ರಿಲ್ 22 ಹಾಗೂ 23ರಂದು ಯಶವಂತಪುರ-ಬೀದರ್ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಏಪ್ರಿಲ್ 23ರಂದು ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯೂ ನಡೆಯಲಿದ್ದು, ಜನರಿಗೆ ಅನುಕೂಲವಾಗಲಿದೆ.
ಬೀದರ್ ಚುನಾವಣಾ ಚಿತ್ರಣ : ಈಶ್ವರ ಖಂಡ್ರೆ v/s ಭಗವಂತ ಖೂಬಾ
ರೈಲು ಸಂಖ್ಯೆ 06507 ಯಶವಂತಪುರ-ಬೀದರ್ ತತ್ಕಾಲ್ ಎಕ್ಸ್ಪ್ರೆಸ್ ಬೇಸಿಗೆ ವಿಶೇಷ ರೈಲು ಏ.22ರಂದು ಸಂಜೆ 6.10ಕ್ಕೆ ಯಶವಂತಪುರದಿಂದ ಹೊರಡಲಿದೆ. ಏ.23ರಂದು ಬೆಳಗ್ಗೆ 6.30ಕ್ಕೆ ಬೀದರ್ ತಲುಪಲಿದೆ.
ರೈಲು ಸಂಖ್ಯೆ 06508 ಬೀದರ್-ಯಶವಂತಪುರ ತತ್ಕಾಲ್ ಎಕ್ಸ್ಪ್ರೆಸ್ ಬೇಸಿಗೆ ರೈಲು ಏ.23ರಂದು ಸಂಜೆ 7ಕ್ಕೆ ಬೀದರ್ ನಗರದಿಂದ ಹೊರಡಲಿದೆ. ಏ.24ರಂದು ಬೆಳಗ್ಗೆ 8.15ಕ್ಕೆ ಯಶವಂತಪುರಕ್ಕೆ ತಲುಪಲಿದೆ.
ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?
ನಿಲ್ದಾಣಗಳು : ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ, ರಾಯಚೂರು, ಸೈದಾಪುರ, ಯಾದಗಿರಿ, ವಾಡಿ ಹಾಗೂ ಕಲಬುರಗಿಯಲ್ಲಿ ನಿಲುಗಡೆಗೊಳ್ಳಲಿದೆ.
ಈ ವಿಶೇಷ ರೈಲು 4 ಎಸಿ 2ಟೈರ್, 12 ಸ್ಲಿಪರ್ ಕ್ಲಾಸ್ ಕೋಚ್, ಎರಡು ಲಗೇಜ್ ಕಂ ಬ್ರೇಕ್ ವ್ಯಾನ್ ಕೋಚ್ ಹೊಂದಿದೆ.
ಏಪ್ರಿಲ್ 23ರಂದು ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಭಗವಂತ ಖೂಬಾ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರು ಕಣದಲ್ಲಿದ್ದಾರೆ.