ಭುವನೇಶ್ವರದಲ್ಲಿ ರೈಲು ಸೇವೆ ಆರಂಭ, ಪುರಿಗೆ ಮೇ 10ರ ತನಕ ಇಲ್ಲ
ಭುವನೇಶ್ವರ, ಮೇ 05: ಫೋನಿ ಚಂಡಮಾರುತದ ಅಬ್ಬರ ಕಡಿಮೆಯಾದ ಹಿನ್ನಲೆಯಲ್ಲಿ ಭುವನೇಶ್ವರದಲ್ಲಿ ಭಾನುವಾರದಂದು ಭಾರತೀಯ ರೈಲ್ವೆ ತನ್ನ ಸೇವೆ ಆರಂಭಿಸಲಿದೆ, ಆದರೆ, ಪುರಿಯಲ್ಲಿ ಮೇ 10ರ ತನಕ ಯಾವುದೇ ರೈಲು ಓಡಾಟ ಸಾಧ್ಯವಿಲ್ಲ ಎಂದು ಇಲಾಖೆ ಹೇಳಿದೆ.
ಫೋನಿ ಚಂಡಮಾರುತದ ಅಬ್ಬರದ ತಣ್ಣಗಾದ 24 ಗಂಟೆಗಳಲ್ಲೇ ಹೌರಾ-ಚೆನ್ನೈ ಮೇನ್ ಲೈನ್ ಆರಂಭಿಸಿರುವುದು ಪ್ರಯಾಣಿಕರಿಗೆ ಶುಭ ಸುದ್ದಿಯಾಗಿದೆ.
ಫೋನಿ ಆರ್ಭಟ: ಅಂಡಮಾನ್ನಲ್ಲಿ ರಾಜ್ಯದ ಪ್ರವಾಸಿಗರಿಗೆ ಸಂಕಷ್ಟ
ಆದರೆ, ಭುವನೇಶ್ವರದಿಂದ ಹೊರಡಲಿರುವ ಎರಡು ರೈಲುಗಳು ಸ್ಥಗಿತಗೊಂಡಿವೆ. ಭುವನೇಶ್ವರ-ತಿರುಪತಿ, ವಿಶಾಪಟ್ಟಣಂ ಇಂಟರ್ ಸಿಟಿ ಕ್ಯಾನ್ಸಲ್ ಮಾಡಲಾಗಿದೆ. ಈ ಎರಡು ರೈಲುಗಳಿಗೆ ಹೊಂದಾಣಿಕೆ ರೈಲುಗಳು ಇನ್ನು ಸಿಕ್ಕಿಲ್ಲ ಎಂದು ಪೂರ್ವ ಕರಾವಲಿ ರೈಲು ವಿಭಾಗದ ವಕ್ತಾರ ಜೆಪಿ ಮಿಶ್ರಾ ಹೇಳಿದ್ದಾರೆ.
ಭುವನೇಶ್ವರದಿಂದ ಪ್ರಶಾಂತಿ ಎಕ್ಸ್ ಪ್ರೆಸ್, ವಿಶಾಖ ಎಕ್ಸ್ ಪ್ರೆಸ್, ರಾಜಧಾನಿ ಎಕ್ಸ್ ಪ್ರೆಸ್, ಕೊನಾರ್ಕ್ ಎಕ್ಸ್ ಪ್ರೆಸ್ ಹಾಗೂ ಹೀರಾಖಂಡ್ ಎಕ್ಸ್ ಪ್ರೆಸ್ ಸಂಚರಿಸುತ್ತವೆ. ಭಾನುವಾರದಂದು 14 ಪ್ಯಾಸೆಂಜರ್ ರೈಲು ಸಂಚರಿಸಲಿವೆ ಕೆಲ ಎಕ್ಸ್ ಪ್ರೆಸ್ ರೈಲುಗಳೂ ಈ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಆರಂಭಿಸಿದರೂ, ಪುರಿ ಕಡೆಗೆ ಇನ್ನು ಸಂಚಾರ ಸಾಧ್ಯವಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
ಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋ
ಕಳೆದ 20 ವರ್ಷಗಳಲ್ಲೇ ಭೀಕರ ಎನ್ನಲಾದ ಫೋನಿ ಚಂಡಮಾರುತ ಸದ್ಯ ಬಾಂಗ್ಲಾದೇಶದ ಕರಾವಳಿಯತ್ತ ಸಾಗಿ, ತನ್ನ ಅಬ್ಬರ ನಿಲ್ಲಿಸಲಿದೆ. ಇದಕ್ಕೂ ಮುನ್ನ ಚಂಡಮಾರುತದ ಹೊಡೆತಕ್ಕೆ ಸಿಲುಕಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ನಿರ್ಗತಿಕರಾಗಿದ್ದಾರೆ. ಆದರೆ, 12 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ ಒಡಿಶಾ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.