ಪುರಿ ಜಗನ್ನಾಥ ರಥಯಾತ್ರೆ: ಕಲಾವಿದನ ಕೈ ಚಳಕದಲ್ಲಿ ಅರಳಿದ ಮರಳಿನ ರಥ
ಪುರಿ ಜಗನ್ನಾಥ ರಥಯಾತ್ರೆ ಆರಂಭಗೊಂಡಿದೆ. ಪುರಿಯ ಸಮುದ್ರದ ತಟದಲ್ಲಿ ಕಲಾವಿದನ ಕೈಚಳಕದಿಂದ ಮರಳಿನಲ್ಲಿ ರಥ ಮೂಡಿಬಂದಿದೆ. ಜಗತ್ ಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆಯನ್ನು ಈ ವರ್ಷವೂ ಕೊರೊನಾ ಕಾರಣದಿಂದ ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ.
ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲವಾದರೂ, ಥಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ ಕೇವಲ ಜನರ ಸಮ್ಮುಖದಲ್ಲಿ ನಡೆಯುತ್ತಿದೆ. ಜುಲೈ 20ರಂದು ಸಂಪನ್ನಗೊಳ್ಳಲಿದೆ.
ಪುರಿ ಜಗನ್ನಾಥ ರಥಯಾತ್ರೆ:ಮಾರ್ಗಸೂಚಿ ಬಿಡುಗಡೆ
ಈ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ನಲ್ಲಿ ರಥದ ಚಿತ್ರವನ್ನು ರಚಿಸಿದ್ದಾರೆ. ಸರಿಸುಮಾರು 43.2 ಅಡಿ ಉದ್ದ ಮತ್ತು 25 ಅಡಿ ಅಗಲವಿರುವ ಭಗವಾನ್ ಜಗನ್ನಾಥರ ರಥ 3ಡಿ ಮರಳು ಕಲೆಯನ್ನು ರಚಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಒಡಿಶಾ ರಾಜ್ಯ ಸರ್ಕಾರದ ಎಸ್ಒಪಿ ಅನ್ವಯ ರಥಯಾತ್ರೆಯಲ್ಲಿ ಭಕ್ತರಿಗೆ ಅವಕಾಶ ನೀಡಿಲ್ಲ ಇನ್ನು ಎರಡೂ ಡೋಸ್ ಲಸಿಕೆ ಪಡೆದು, ಆರ್-ಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರುವವರಿಗೆ ರಥ ಎಳೆಯಲು ಅವಕಾಶ ನೀಡಲಾಗುತ್ತಿದೆ.
ರಥಯಾತ್ರೆಯ ಸಂದರ್ಭದಲ್ಲಿ ಒಡಿಶಾದ ಪುರಿ ಬೀಚ್ನಲ್ಲಿ 43.2 ಅಡಿ ಉದ್ದ ಮತ್ತು 35 ಅಡಿ ಅಗಲದ ಭಗವಾನ್ ಜಗನ್ನಾಥರ ಅವರ ನಂದಿಗೋಸ ರಥದ ಅತಿದೊಡ್ಡ 3ಡಿ ಸ್ಯಾಂಡ್ ಆರ್ಟ್ ರಥವನ್ನು ನಾವು ರಚಿಸಿದ್ದೇವೆ ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಅತಿದೊಡ್ಡ 3ಡಿ ಸ್ಯಾಂಡ್ ಆರ್ಟ್ ಸುಂದರವಾಗಿ ಗೋಚರಿಸುತ್ತಿದೆ. ಕಡಲ ತೀರದ ಮರಳಿನಲ್ಲಿ ಬಣ್ಣದಿಂದ ಆವೃತವಾದ ಚಿತ್ರ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಸುದರ್ಶನ್ ಅವರು ಗಿನ್ನಿಸ್ ದಾಖಲೆ ಸೇರಿದಂತೆ ಪದ್ಮಶ್ರೀ ಪುರಸ್ಕೃತ ಮರಳು ಕಲಾವಿದ ವಿಶ್ವದಾದ್ಯಂತ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ.