ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ - 19 ಓಡಿಸಲು ದೇವಾಲಯದಲ್ಲಿ ನರಬಲಿ ಕೊಟ್ಟ ಅರ್ಚಕ!

|
Google Oneindia Kannada News

ಭುವನೇಶ್ವರ, ಮೇ 28 : ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ವಿಶ್ವದ ಹಲವು ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಒಡಿಶಾದಲ್ಲಿ ಕೊರೊನಾ ಓಡಿಸಲು ಅರ್ಚಕರೊಬ್ಬರು ನರಬಲಿ ಕೊಟ್ಟಿದ್ದು, ಈಗ ಪೊಲೀಸರ ವಶದಲ್ಲಿದ್ದಾರೆ.

Recommended Video

BJP ಅಂಗೈಯಲ್ಲಿ ಅರಮನೆ, ಮಾಯಾ ಬಜಾರ್ ತೋರಿಸಿದ್ದಾರೆ ಎಂದ ಈಶ್ವರ ಖಂಡ್ರೆ | Oneindia Kannada

ಒಡಿಶಾದ ಕಟಕ್ ಜಿಲ್ಲೆಯ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಅರ್ಚಕ ದೇವಾಲಯದ ಆವರಣದಲ್ಲಿಯೇ 52 ವರ್ಷದ ವ್ಯಕ್ತಿಯನ್ನು ಬಲಿಕೊಟ್ಟಿದ್ದಾರೆ. ಅರ್ಚಕ ಈಗ ಪೊಲೀಸರ ವಶದಲ್ಲಿದ್ದು, ಕೋವಿಡ್ - 19 ಓಡಿಸುಲು ಬಲಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬ್ರೇಕಿಂಗ್ ನ್ಯೂಸ್; ಜೂನ್ 1ರಿಂದ ಬಾಗಿಲು ತೆರೆಯಲಿವೆ ದೇವಾಲಯ ಬ್ರೇಕಿಂಗ್ ನ್ಯೂಸ್; ಜೂನ್ 1ರಿಂದ ಬಾಗಿಲು ತೆರೆಯಲಿವೆ ದೇವಾಲಯ

70 ವರ್ಷದ ಅರ್ಚಕ ನರಬಲಿ ಕೊಟ್ಟ ಬಳಿಕ ಪೊಲೀಸರ ಮುಂದೆ ಶರಣಾಗಿದ್ದು ತಾನು ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಅರ್ಚಕನ ಹೇಳಿಕೆ ಆಧರಿಸಿ ದೇವಾಲಯಕ್ಕೆ ತೆರಳಿ ತಪಾಸಣೆ ನಡೆಸಿದ ಪೊಲೀಸರು ವ್ಯಕ್ತಿಯ ಶವ ಸಿಕ್ಕಿದೆ.

ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್ ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್

 Priest Performs Human Sacrifice To End COVID 19 Pandemic

"ಕನಸಿನಲ್ಲಿ ಬಂದ ದೇವರು ತನಗೆ ನರಬಲಿ ನೀಡುವಂತೆ ಸೂಚಿಸಿದ. ನರಬಲಿ ಕೊಟ್ಟರೆ ಕೋವಿಡ್ - 19 ಸಂಪೂರ್ಣವಾಗಿ ಹೋಗುತ್ತದೆ ಎಂದು ದೇವರು ಹೇಳಿದ್ದ" ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಹರಪನಹಳ್ಳಿಯ ಐತಿಹಾಸಿಕ ಉಚ್ಚಂಗಿ ದೇವಿ ದೇವಾಲಯ ತೆರವುಹರಪನಹಳ್ಳಿಯ ಐತಿಹಾಸಿಕ ಉಚ್ಚಂಗಿ ದೇವಿ ದೇವಾಲಯ ತೆರವು

ಬುಧವಾರ ರಾತ್ರಿ ಬ್ರಾಹ್ಮಿಣಿ ದೇವಿ ದೇವಾಲಯದ ಆವರಣದಲ್ಲಿ ಸರೋಜ್ ಕುಮಾರ್ ಪ್ರಧಾನ್ ಹತ್ಯೆಯಾಗಿದೆ. ಆದರೆ, ಸ್ಥಳೀಯರು ಅರ್ಚಕ ಮತ್ತು ಸರೋಜ್ ಕುಮಾರ್ ನಡುವೆ ಹಳೆಯ ದ್ವೇಷವಿತ್ತು ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು, ಹತ್ಯೆಗೆ ಬಳಸಿದ ಗರಗಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

English summary
Odisha's Cuttack district Brahmani devi temple priest surrendered to police and confessed that he committed the murder. Priest allegedly performed human sacrifice to end the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X