ಒಡಿಶಾದಲ್ಲಿ ಕಾಂಗ್ರೆಸ್ಸಿಗೆ ಆಘಾತದ ಮೇಲೆ ಆಘಾತ, ಮತ್ತೊಬ್ಬ ಶಾಸಕ ಬಿಜೆಪಿಗೆ
ನವದೆಹಲಿ, ಮಾರ್ಚ್ 17: ಬಿಜೆಡಿಯ ಹಾಲಿ ಸಂಸದ, ಹಿರಿಯ ನಾಯಕ ಬಲಭದ್ರ ಮಾಂಝಿ ಅವರು ಬಿಜೆಡಿ ತೊರೆದು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡ ಬೆನ್ನಲ್ಲೇ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ ತೊರೆಯುತ್ತಿರುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ.
ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ
ಕಾಂಗ್ರೆಸ್ ಮುಖಂಡ ಪ್ರಕಾಶ್ ಚಂದ್ರ ಬೆಹೆರಾ ಅವರು ಭಾನುವಾರದಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಕಾಂಗ್ರೆಸ್ಸಿನ ಸಲೇಪುರ್(ಕಟಕ್, ಒಡಿಶಾ)ದ ಶಾಸಕರಾಗಿದ್ದಾ ಪ್ರಕಾಶ್ ಅವರು ಶನಿವಾರದಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Delhi: Prakash Chandra Behera joins BJP in the presence of Union Minister Dharmendra Pradhan. Behera, Congress MLA from Salepur (Cuttack, Odisha), had resigned from the party yesterday. pic.twitter.com/4hrdlMq0iN
— ANI (@ANI) March 17, 2019
147 ಸ್ಥಾನಗಳುಳ್ಳ ಒಡಿಶಾ ವಿಧಾನಸಭೆಗೆ ಏಪ್ರಿಲ್ 11 ಹಾಗೂ ಏಪ್ರಿಲ್ 29ರಂದು ಒಟ್ಟು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ 2019ರ ಜೊತೆ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ. ಹಾಲಿ ಒಡಿಶಾ ವಿಧಾನಸಭೆಯ ಅವಧಿ ಜೂನ್ 11, 2019ರದು ಮುಕ್ತಾಯವಾಗಲಿದೆ.
ಇನ್ನು ಒಡಿಶಾದಲ್ಲಿ ಒಟ್ಟು 21(543) ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳನ್ನು 2014 ರಲ್ಲಿ ಬಿಜು ಜನತಾದಳವೇ ಗೆದ್ದು ದಾಖಲೆ ಬರೆದಿತ್ತು. ಅಕಸ್ಮಾತ್ ಈ ಪಕ್ಷ ಯಾವುದೇ ಒಂದು ಮೈತ್ರಿಕೂಟದ ಭಾಗವಾದರೂ ಅವರಿಗೆ ಲಾಭ ಖಂಡಿತ ಎಂಬ ಎಣಿಕೆಯಿದೆ.