ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ
ಭುವನೇಶ್ವರ, ಮೇ 6:ಫೋನಿ ಚಂಡಮಾರುತದಿಂದ ಹಾನಿಗೀಡಾಗಿರುವ ಒಡಿಶಾಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ಭೇಟಿ ನೀಡಿದ್ದಾರೆ.
ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯನ್ನು ರಾಜ್ಯಪಾಲ ಗಣೇಶ ಇಲಾಲ್ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಸ್ವಾಗತಿಸಿದ್ದಾರೆ.
ತಗ್ಗಿಲ್ಲ 'ಫೋನಿ' ಅಬ್ಬರ, 34 ಕ್ಕೇರಿದ ಮೃತರ ಸಂಖ್ಯೆ
ಒಡಿಶಾದ ಪುರಿ ಸೇರಿದಂತೆ ಇತರೆ ಪ್ರದೇಶಗಳನ್ನು ಮೋದಿ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಲಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಲಿದ್ದಾರೆ.
ಫೋನಿ ಚಂಡಮಾರುತ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಈಗಾಗಲೇ 1029 ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತು.
ಚಂಡಮಾರತದ ಅಬ್ಬರ ಕುರಿತ ಅಪ್ಡೇಟ್ಸ್, ಸಹಾಯಕ್ಕಾಗಿ ಡಯಲ್ 1938
ಈ ಮುನ್ನೆಚ್ಚರಿಕೆಯಿಂದ ಸಾವುನೋವುಗಳ ಸಂಖ್ಯೆ ಈ ಬಾರಿ ಕಡಿಮೆಯಾಗಿತ್ತು. ಇದುವರೆಗು ಫೋನಿ ಚಂಡಮಾರುತಕ್ಕೆ 34 ಮಂದಿ ಬಲಿಯಾಗಿದ್ದಾರೆ.
English summary
Prime minister Narendra Modi today visiting Foni cyclone-affected areas in Odisha and he will conduct the areal survey and meeting.
Story first published: Monday, May 6, 2019, 9:24 [IST]