ಅಧಿಕಾರಿ ದರ್ಪ: ಪಿಂಚಣಿ ಹಣಕ್ಕಾಗಿ ನಡೆದ ಕರುಣಾಜನಕ ಘಟನೆ
ಭುವನೇಶ್ವರ, ಜೂನ್ 16: ಪಿಂಚಣಿ ಹಣ ಪಡೆಯಲು ಬಂದ ಮಹಿಳೆಯ ಮೇಲೆ ಒಡಿಶಾದ ಅಧಿಕಾರಿ ದರ್ಪ ತೋರಿಸಿದ್ದಾನೆ. ಹೀಗಾಗಿ ಸಾರ್ವಜನಿಕರಿಂದ ಅಧಿಕಾರಿ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Recommended Video
ಒಡಿಶಾದ ನುವಾಪಾಸ ಜಿಲ್ಲೆಯ ಬರಗನ್ ಎಂಬ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಲಾಭ್ ಭಾಗೆಲ್ ಎಂಬ 100 ವರ್ಷದ ವೃದ್ಧೆ ತಮ್ಮ ಜನ್ ಧನ್ ಖಾತೆಯಲ್ಲಿರುವ 1500 ರೂಪಾಯಿಗಳನ್ನು ಪಡೆಯಬೇಕಾಗುತ್ತಿತ್ತು. ಹೀಗಾಗಿ, ತನ್ನ 70 ವರ್ಷದ ಮಗಳು ಗುಂಜಾ ದೇವಿಗೆ ತಾನೇ ಹೋಗಿ ತೆಗೆದುಕೊಂಡುಬರುವಂತೆ ಹೇಳಿದ್ದರು.
ಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆ
100 ವರ್ಷದ ವೃದ್ಧೆ ಹಾಸಿಗೆ ಹಿಡಿದಿದ್ದು, ಆಕೆಯ ಬದಲಿಗೆ ಮಗಳು ಬ್ಯಾಂಕ್ಗೆ ಹೋಗಿ ಹಣ ನೀಡುವಂತೆ ತಿಳಿಸಿದ್ದರು. ಆದರೆ, ಬ್ಯಾಂಕ್ ಅಧಿಕಾರಿ ಆಕೆಯ ತಾಯಿಯೇ ಬರಬೇಕು ಆಗ ಮಾತ್ರ ಹಣ ನೀಡಲು ಸಾಧ್ಯ ಎಂದು ಹೇಳಿದ. ಬ್ಯಾಂಕ್ ಅಧಿಕಾರಿ ಏನೇ ಹೇಳಿದರೂ ಒಪ್ಪದ ಕಾರಣ ಆ ಮಹಿಳೆ ತನ್ನ ತಾಯಿಯನ್ನು ಕರೆದುಕೊಂಡು ಬ್ಯಾಂಕ್ಗೆ ಬಂದಿದ್ದಾರೆ.
ಹಾಸಿಗೆ ಹಿಡಿದ 100 ವರ್ಷದ ವೃದ್ಧೆ ಎದ್ದು ನಡೆಯುವುದು ಹೇಗೆ, ಹೀಗಾಗಿ, ಹಾಸಿಗೆ ಸಮೇತ ತನ್ನ ತಾಯಿಯನ್ನು ಬ್ಯಾಂಕ್ಗೆ ಕರೆದುಕೊಂಡು ಬಂದಿದ್ದಾರೆ. ಆಗ ಅಧಿಕಾರಿ ಹಣ ನೀಡಿದ್ದಾರೆ. ತನ್ನ ಮನೆಯಿಂದ ಮಹಿಳೆ ಮಂಚದ ಮೇಲೆ ತಾಯಿಯನ್ನು ಮಲಗಿಸಿಕೊಂಡು ಎಳೆದುಕೊಂಡೇ ಬಂದಿದ್ದಾರೆ. ಅಧಿಕಾರಿಯ ಇಂತಹ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
Odisha: In a video that surfaced recently, a woman was seen dragging her centenarian mother on a cot, to a bank in Nuapada district to withdraw her pension money allegedly after the bank asked for physical verification. pic.twitter.com/XPs55ElINA
— ANI (@ANI) June 15, 2020
ನುವಾಪಾದ ಶಾಸಕ ರಾಜು ದೊಲ್ಕಿಯಾ ಈ ಬಗ್ಗೆ ಮಾತನಾಡಿದ್ದು ''ಇದು ಅಮಾನವೀಯ ಘಟನೆಯಾಗಿದ್ದು, ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಯನ್ನು ಸರಕಾರವು ತಕ್ಷಣವೇ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ'' ಎಂದಿದ್ದಾರೆ.