ಅಂಗನವಾಡಿ ಕಾರ್ಯಕರ್ತೆಯರಿಗೆ ಒಡಿಶಾ ಸರ್ಕಾರದಿಂದ ಸಿಹಿಸುದ್ದಿ
ಭುವನೇಶ್ವರ, ಜನವರಿ 09: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಿಹಿಸುದ್ದಿಯನ್ನು ನೀಡಿದ್ದಾರೆ. ಒಡಿಶಾ ಮುಖ್ಯಮಂತ್ರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆರ್ಥಿಕ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಸಹಿತ ವೈದ್ಯಕೀಯ ರಜೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಆರ್ಥಿಕ ಪ್ರೋತ್ಸಾಹಧನವನ್ನು 20,000 ರೂ.ಗಳಿಂದ 40,000 ರೂ.ಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಇನ್ನು ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ 30,000 ಮತ್ತು 20,000 ರೂಪಾಯಿಗೆ ಸಹಾಯ ಧನ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ರಾಜ್ಯದ ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ 15,000 ಮತ್ತು 10,000 ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತಿತ್ತು.
ಕಾಫಿ ಕೊಯ್ಲುಗಾಗಿ ಕೇರಳದತ್ತ ಮುಖ ಮಾಡಿದ ಕರ್ನಾಟಕದ ಕಾರ್ಮಿಕರು!
ಸಾಮಾಜಿಕ
ಭದ್ರತೆಯ
ಹಿನ್ನೆಲೆಯಿಂದಾಗಿ
ಅಂಗನವಾಡಿ
ಕಾರ್ಯಕರ್ತೆಯರು,
ಸಣ್ಣ
ಅಂಗನವಾಡಿ
ಕಾರ್ಯಕರ್ತೆಯರು
ಮತ್ತು
ಸಹಾಯಕಿಯರಿಗೆ
62
ವರ್ಷ
ಆದ
ಬಳಿಕ
ಒಡಿಶಾ
ರಾಜ್ಯ
ಸರ್ಕಾರವು
ಪ್ರೋತ್ಸಾಹಧನವನ್ನು
ನೀಡುತ್ತಿದೆ.
ಇನ್ನು
ಅಂಗನವಾಡಿ
ಕಾರ್ಯಕರ್ತೆಯರಿಗೆ
ಜನವರಿ
1,
2019
ರಿಂದ
ಪೂರ್ವಾನ್ವಯವಾಗುವಂತೆ
ಆರ್ಥಿಕ
ಪ್ರೋತ್ಸಾಹವನ್ನು
ನೀಡಲಾಗುವುದು
ಎಂದು
ಸಿಎಂಒ
ಹೇಳಿಕೆಯಲ್ಲಿ
ಸೇರ್ಪಡೆ
ಮಾಡಲಾಗಿದೆ.
ಇನ್ನು
ಒಡಿಶಾ
ಸರ್ಕಾರದ
ಈ
ಕ್ರಮದಿಂದಾಗಿ
ಒಟ್ಟು
1.3
ಲಕ್ಷ
ಅಂಗನವಾಡಿ
ಕಾರ್ಯಕರ್ತೆಯರು
ಪ್ರಯೋಜನ
ಪಡೆಯಲಿದ್ದಾರೆ.
2019ರ
ಜನವರಿಯಿಂದ
ಇಲ್ಲಿಯವರೆಗೆ
1,991
ಅಂಗನವಾಡಿ
ಕಾರ್ಯಕರ್ತೆಯರು,
ಸಣ್ಣ
ಅಂಗನವಾಡಿ
ಕಾರ್ಯಕರ್ತೆಯರು
ಮತ್ತು
ಸಹಾಯಕಿಯರು
ಈ
ಪ್ರಯೋಜನವನ್ನು
ಪಡೆಯಲಿದ್ದಾರೆ.
ಅಂಗನವಾಡಿ ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ರಾಜ್ಯದಲ್ಲಿ "ಮಿಷನ್ ಶಕ್ತಿ" ಅಡಿಯಲ್ಲಿ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುವ 50,000 ಸಮುದಾಯ ಸಹಾಯಕ ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ವೇತನ ಸಹಿತ ವೈದ್ಯಕೀಯ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸೇವೆಯಿಂದ ನಿವೃತ್ತರಾದವರಿಗೆ ಒಂದು ಬಾರಿಯ ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸುವುದಾಗಿಯೂ ಘೋಷಿಸಿದರು. "ಎಲ್ಲಾ ಸಮುದಾಯದ ಬೆಂಬಲ ಸಿಬ್ಬಂದಿ ವಾರ್ಷಿಕ 1,000 ರೂ.ಗಳ ಏಕರೂಪದ ಭತ್ಯೆಯನ್ನು ಪಡೆಯುತ್ತಾರೆ. ಇನ್ನು ಆದ್ಯತೆಯ ಮೇರೆಗೆ ಸ್ಮಾರ್ಟ್ಫೋನ್ ಖರೀದಿಸಲು 5,000 ರೂ.ಗಳ ಒಂದು ಬಾರಿ ಆರ್ಥಿಕ ಸಹಾಯವನ್ನು ನೀಡಲಾಗುವುದು," ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆ ತಿಳಿಸಿದೆ (ಒನ್ಇಂಡಿಯಾ ಸುದ್ದಿ)
Recommended Video