ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಡಿಶಾದಲ್ಲಿ ರೈಲು ಅಪಘಾತ: ಕನಿಷ್ಠ 40 ಮಂದಿಗೆ ಗಾಯ
ಕಟಕ್, ಜನವರಿ 16: ಒಡಿಶಾದ ಕಟಕ್ ಸಮೀಪದ ನೆರ್ಗುಂಡಿ ರೈಲ್ವೆ ನಿಲ್ದಾಣದ ಸಮೀಪ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು ಮತ್ತು ತಪ್ಪಿ ಕನಿಷ್ಠ 40 ಮಂದಿ ಗಾಯಗೊಂಡಿದ್ದು, ಅವರಲ್ಲಿ ಆರು ಮಂದಿ ಸ್ಥಿತಿ ತರಾ ಗಂಭೀರವಾಗಿದೆ.
ಗುರುವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಎಂಟು ಬೋಗಿಗಳು ಹಳಿ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಲಗಾಂವ್ ಮತ್ತು ನೆರ್ಗುಂಡಿ ನಡುವೆ ಈ ದುರಂತ ನಡೆದಿದೆ.
ಮುಂಜಾನೆ ತೀವ್ರ ಇಬ್ಬನಿಯ ಕಾರಣ ಗೂಡ್ಸ್ ರೈಲು ಇರುವುದು ಕಾಣಿಸಿರಲಿಲ್ಲ ಹೀಗಾಗಿ ಈ ಅಪಘಾತ ಉಂಟಾಗಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments
English summary
At least 40 passengers were injured after 8 coaches of Mumbai-Bhubaneshwar Express derailed in Odisha's Cuttack on Thursday morning.
Story first published: Thursday, January 16, 2020, 9:29 [IST]