ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರು ಹೋಗುತ್ತಿದ್ದ ಬಸ್ ಅಪಘಾತ; 40 ಜನರ ರಕ್ಷಣೆ

|
Google Oneindia Kannada News

ಭುವನೇಶ್ವರ, ಮೇ 03 : ಗುಜರಾತ್‌ನ ಸೂರತ್‌ನಿಂದ ಒಡಿಶಾಕ್ಕೆ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 40 ಜನರನ್ನು ರಕ್ಷಣೆ ಮಾಡಲಾಗಿದೆ.

ಒಡಿಶಾದ ಗಂಜಾಮ್-ಕಂದಮಾಲ್ ಗಡಿಯಲ್ಲಿ ಬರುವ ಕಳಿಂಗಾ ಘಾಟ್‌ನಲ್ಲಿ ಈ ಅಪಘಾತ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.

ಸರ್ಕಾರಿ ಬಸ್ ಚಾಲಕರಿಗೆ ಬಹುಮಾನ ಘೋಷಿಸಿದ ಸಚಿವರು ಸರ್ಕಾರಿ ಬಸ್ ಚಾಲಕರಿಗೆ ಬಹುಮಾನ ಘೋಷಿಸಿದ ಸಚಿವರು

ಬಸ್‌ನಲ್ಲಿದ್ದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 40 ಜನರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಒಡಿಶಾದ ಗಂಜಾಮ್‌ಗೆ ಬಸ್ ತಲುಪಬೇಕಿತ್ತು.

ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು

Bus Overturned

ಒಡಿಶಾ ದಕ್ಷಿಣ ವಲಯ ಐಜಿಪಿ ಸತ್ಯಬಾರ್ತ ಬೋಯ್ ಈ ಕುರಿತು ಮಾತನಾಡಿದ್ದು, "ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ತವರಿಗೆ ಹೋಗಲು ಕೇಂದ್ರ ಸಮ್ಮತಿಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ತವರಿಗೆ ಹೋಗಲು ಕೇಂದ್ರ ಸಮ್ಮತಿ

ಕೊರೊನಾ ಹರಡದಂತೆ ತಡೆಯಲು ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಬಳಿಕ ಸಾರಿಗೆ ಸಂಚಾರ ರದ್ದಾಗಿದ್ದರಿಂದ ಹಲವು ಕಾರ್ಮಿಕರು ಬೇರೆ-ಬೇರೆ ರಾಜ್ಯಗಳಲ್ಲಿಯೇ ಉಳಿದರು.

ಈಗ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳ ಸಂಚಾರಕ್ಕೆ ಅವಕಾಶ ನೀಡಿದೆ. ಸ್ಥಳೀಯ ರಾಜ್ಯ ಸರ್ಕಾರಗಳೇ ಕಾರ್ಮಿಕರನ್ನು ಅವರ ತವರು ರಾಜ್ಯಕ್ಕೆ ಕಳಿಸಿಕೊಡುತ್ತಿವೆ.

English summary
A bus carrying stranded migrants from Surat in Gujarat to Berhampur in Odisha, overturned near Kalinga Ghat. One died and another one injured in the accident, 40 persons have been rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X