ಬಿಜೆಪಿಗೆ ಮತ್ತೆ ಶಾಕ್, ಪಕ್ಷ ತೊರೆದ ಇಬ್ಬರು ನಾಯಕರು!
Recommended Video
ಭುವನೇಶ್ವರ್, ನವೆಂಬರ್ 30: ರಾಜಸ್ಥಾನದ ಬಿಜೆಪಿ ಮುಖಂಡರಾಗಿದ್ದ ಮನ್ವೇಂದ್ರ ಸಿಂಗ್ ಮತ್ತು ಹರೀಶ್ ಮೀನಾ ಅವರ ರಾಜೀನಾಮೆಯಿಂದ ಅಘಾತಕ್ಕೊಳಗಾಗಿದ್ದ ಬಿಜೆಪಿಗೆ ಇದೀಗ ಒಡಿಶಾದಲ್ಲೂ ಅಂಥದೇ ಆಘಾತ ಎದುರಾಗಿದೆ.
ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!
ಕೇಂದ್ರದ ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿದ್ದ ಒಡಿಶಾ ಬಿಜೆಪಿ ಮುಖಂಡ ದಿಲೀಪ್ ರೇ ಅವರು ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆಯ ಸಮಯದಲ್ಲಿ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ!
ಅಷ್ಟೇ ಅಲ್ಲ, ಬಿಜೆಪಿಯ ಇನ್ನೋರ್ವ ಮುಖಂಡ ಬಿಜೋಯ್ ಮಹಾಪಾತ್ರಾ ಅವರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ನಾಯಕರೂ ತಮ್ಮ ಜಂಟಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಅದನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಳಿಸಿದ್ದಾರೆ.
Former Union Minister Dilip Ray resigns as Rourkela MLA,quits BJP; says in his resignation letter,'I acknowledge my failure in living up to their (constituents) expectations&therefore taking up moral responsibility, I've decide to quit. The decision is emotionally painful for me' pic.twitter.com/EkzpmqDXmC
— ANI (@ANI) November 30, 2018
"ಪಕ್ಷದಲ್ಲಿ ನಮ್ಮಂಥ ಹಿರಿಯರನ್ನು ಗೌರವದಿಂದ ಕಾಣಲಾಗುತ್ತಿಲ್ಲ. ನಾವು ಪ್ರದರ್ಶನದ ಬೊಂಬೆಗಳಂತೆ ಇರುವುದಾದರೆ ನಮಗೆ ಈ ಸ್ಥಾನದ ಅಗತ್ಯವಿಲ್ಲ. ನಾವು ಪಕ್ಷಕ್ಕಾಗಿ ದಶಕಗಳ ಕಾಲ ದುಡಿದಿದ್ದೇವೆ. ಆದರೆ ಇದೀಗ ನಮ್ಮನ್ನು ಕಡೆಗಣಿಸುತ್ತಿರುವುದು ಸರಿಯಲ್ಲ" ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಐದು ರಾಜ್ಯಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಹೊತ್ತಲ್ಲಿ ಹೀಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ, ಪ್ರಮುಖ ಮುಖಂಡರೇ ರಾಜೀನಾಮೆಯ ಹಾದಿ ತುಳಿದಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂಬ ಆತಂಕ ಪಕ್ಷದ ನಾಯಕರದಾಗಿದೆ.