ಅಂಫಾನ್ ಆರ್ಭಟ: ಒಡಿಶಾಗೆ 500 ಕೋಟಿ ರುಪಾಯಿಯ ನೆರವು
ಭುವನೇಶ್ವರ, ಮೇ 22: ಅಂಫಾನ್ ಚಂಡಮಾರುತ ಪೀಡಿತ ಒಡಿಶಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 500 ಕೋಟಿ ರುಪಾಯಿಯ ಮುಂಗಡ ಹಣಕಾಸು ನೆರವು ಘೋಷಿಸಿದ್ದಾರೆ.
ಅವರು ಶುಕ್ರವಾರ ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಹಣಕಾಸಿನ ನೆರವು ಘೋಷಣೆ ಮಾಡಿದರು. ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಉಪಸ್ಥಿತರಿದ್ದರು.
ಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾ
#WATCH: PM Modi conducted aerial survey of areas affected by #CycloneAmphan in Odisha today. CM Naveen Patnaik&Guv Ganeshi Lal also accompanied. Financial assistance of Rs 500 Cr announced for state, ex-gratia of Rs 2 lakh to next of kin of deceased&Rs 50,000 to seriously injured pic.twitter.com/XiUyIfrKDx
— ANI (@ANI) May 22, 2020
ಒಡಿಶಾ ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಪಡೆದ ನಂತರ ದೀರ್ಘಾವಧಿಯ ಪುನರ್ವಸತಿ ಕ್ರಮಗಳಿಗೆ ಹೆಚ್ಚಿನ ನೆರವು ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.
ಮೋದಿ ಅವರು ಭದ್ರಾಕ್, ಬಾಲಸೋರ್, ಜಾಜ್ಪುರ ಮತ್ತು ಮಯೂರ್ಭಂಜ್ ಮುಂತಾದ ಜಿಲ್ಲೆಗಳಲ್ಲಿ ಸುಮಾರು 90 ನಿಮಿಷಗಳ ಕಾಲ ವೈಮಾನಿನ ಸಮೀಕ್ಷೆ ಮಾಡಿದರು.