8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್ ವಿಕಾಸ್ ದುಬೆ ಬಂಧನ
ಭೋಪಾಲ್, ಜುಲೈ 09: ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜೈನ್ ಅಲ್ಲಿ ಪೊಲೀಸರು ಬಂಧಿಸಿದ್ದಾರೆ.
Recommended Video
ಕಳೆದ ವಾರವಷ್ಟೇ ರೌಡಿ ವಿಕಾಸ್ ದುಬೆ ಇರುವ ಪ್ರದೇಶದ ಬಗ್ಗೆ ಪಕ್ಕಾ ಮಾಹಿತಿ ಪಡೆದು 50 ಪೊಲೀಸರ ತಂಡ ಆತನನ್ನು ಬಂಧಿಸಲು ತೆರಳಿತ್ತು.
ಆಗ ವಿಕಾಸ್ ದುಬೆ ಮತ್ತು ಆತನ ಸಹಚರರು ಪೊಲೀಸರ ಆಯುಧಗಳನ್ನೇ ವಶಪಡಿಸಿಕೊಂಡು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 8 ಮಂದಿ ಪೊಲೀಸರು ಮೃತಪಟ್ಟಿದ್ದರು.
ಉತ್ತರ
ಪ್ರದೇಶವನ್ನು
ಬೆಚ್ಚಿ
ಬೀಳಿಸಿದ
ರೌಡಿ
ವಿಕಾಸ್
ದುಬೆ
ಯಾರು?
ಬಳಿಕ
ಆತನ
ತನ್ನ
ಸಹಚರರೊಂದಿಗೆ
ತಲೆ
ಮರೆಸಿಕೊಂಡಿದ್ದ,
ಬಳಿಕ
ಆತನ
ನಾಲ್ವರು
ಸಂಬಂಧಿಯನ್ನು
ಬಂಧಿಸಲಾಗಿತ್ತು,
ಆತನ
ಆಪ್ತ
ಅಮರ್
ದುಬೆಯನ್ನು
ಪೊಲೀಸರು
ಬುಧವಾರ
ಹತ್ಯೆ
ಮಾಡಿದ್ದರು,
ಇಂದು
ಮತ್ತೊಬ್ಬ
ಅತ್ಯಾಪ್ತ
ಪ್ರಭಾತ್
ಮಿಶ್ರಾನನ್ನು
ಎನ್ಕೌಂಟರ್ನಲ್ಲಿ
ಹತ್ಯೆ
ಮಾಡಿದ್ದಾರೆ.
ವಿಕಾಸ್ ದುಬೆ ಹರ್ಯಾಣದ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ, ಬಳಿಕ ಆತನನ್ನು ಬಂಧಿಸಲು ತೆರಳಿದಾಗ ಆತ ಅಲ್ಲಿಂದ ಎಸ್ಕೇಪ್ ಆಗಿದ್ದ, ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. 2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ.
ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ. ಆತನನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದರು.