ವಿಐಪಿ ಭೇಟಿ ಮಧ್ಯೆ ಉಜ್ಜಯಿನಿ ದೇವಾಲಯದಲ್ಲಿ ಜನಸಂದಣಿ: ಅನೇಕ ಮಂದಿಗೆ ಗಾಯ
ಭೋಪಾಲ್, ಜು.27: ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ಶಿವ ದೇವಸ್ಥಾನದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಭಕ್ತರು ಸೋಮವಾರ ಗಾಯಗೊಂಡಿದ್ದಾರೆ. ಹಾಗೆಯೇ ಕೋವಿಡ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ ಕೆಲವು ವಿಐಪಿಗಳ ಭೇಟಿ ಭಕ್ತರ ಸುಗಮ ಸಂಚಾರದ ಮೇಲೆ ಪರಿಣಾಮ ಬೀರಿದ ನಂತರ ಜನಸಂದಣಿಯನ್ನು ನಿಯಂತ್ರಿಸಲಾಗದೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ದೇಶದಲ್ಲಿ ಮಂಗಳವಾರ ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ದಿಢೀರ್ ಇಳಿಕೆ
ದೇವಾಲಯದ ನಾಲ್ಕನೇ ಗೇಟ್ನಲ್ಲಿ ಈ ಘಟನೆ ನಡೆದಿದೆ. ತಳ್ಳಾಟ ಉಂಟಾದ ಕಾರಣ ಭದ್ರತಾ ಸಿಬ್ಬಂದಿಗಳು ದಾರಿ ಮಾಡಿಕೊಟ್ಟಿತ್ತು, ಜನರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಜನರು ಕೆಳಗೆ ಬಿದ್ದಿದ್ದಾರೆ. ನುಗಾಟದಲ್ಲಿ ನೆಲಕ್ಕೆ ಬಿದ್ದವರ ಮೇಲೆ ಮತ್ತೆ ಹಲವು ಮಂದಿ ಬಿದ್ದಿದ್ದಾರೆ. ಘಟನೆಯಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕೆಲವು ಭಕ್ತರು ದೈಹಿಕ ಹಿಂಸಾಚಾರದಲ್ಲಿ ತೊಡಗಿದ್ದರೆ, ಪೊಲೀಸರನ್ನು ದೂಡಿದ್ದಾರೆ ಎಂಬುದು ಘಟನೆಯ ವೀಡಿಯೊ ತೋರಿಸುತ್ತದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಲೇಶ್ವರ ದೇವಾಲಯವೂ ಒಂದು. ಇದು ಕಳೆದ ತಿಂಗಳು ಮತ್ತೆ ತೆರೆಯಲಾಗಿದೆ. ಆದರೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಅಥವಾ ಭೇಟಿಗೆ 48 ಗಂಟೆಗಳ ಮೊದಲು ಪಡೆದ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಮಾತ್ರ ಈ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಇದೆ.
''ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ 3,500 ಭಕ್ತರಿಗೆ ಆವರಣಕ್ಕೆ ಪ್ರವೇಶಿಸಲು ಅನುಮತಿ ಇದೆ. ತಲಾ ಎರಡು ಗಂಟೆಗಳ ಏಳು ಸಮಯದ ಸ್ಲಾಟ್ಗಳಿವೆ, ಪ್ರತಿ ಸ್ಲಾಟ್ನಲ್ಲಿ 500 ಜನರಿಗೆ ಅವಕಾಶವಿದೆ. ಆದರೆ, ವಿಐಪಿಗಳಾದ ಉಮಾ ಭಾರತಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಸೋಮವಾರ ತಮ್ಮ ಕುಟುಂಬಗಳೊಂದಿಗೆ ದೇವಾಲಯಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಇದರಿಂದಾಗಿ ಭಕ್ತರಿಗೆ ಮತ್ತು ಆಡಳಿತಕ್ಕೆ ತೊಂದರೆ ಉಂಟಾಯಿತು,'' ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣ
ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಇಂದು ಒಂದು ಹೊರತುಪಡಿಸಿ, ಮುಂದಿನ ಸೋಮವಾರದಿಂದ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಹೇಳಿದರು. "ನಾವು ಮುಂದಿನ ಸೋಮವಾರದಂದು ಕುಳಿತು ಯೋಜಿಸುತ್ತೇವೆ. ಇಂದು ನಮ್ಮಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲಾಗಿಲ್ಲ. ಒಂದೇ ಸಮಯದಲ್ಲಿ ಹಲವಾರು ಜನರು ಇದ್ದರು. ನಾವು ಯೋಜನೆಯನ್ನು ಪರಿಷ್ಕರಿಸುತ್ತೇವೆ. ನಾವು ಸಾಮಾಜಿಕ ದೂರವನ್ನು ಖಚಿತಪಡಿಸುತ್ತೇವೆ,'' ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)