'ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದು'
Recommended Video
ಭೋಪಾಲ್, ಜನವರಿ 15: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಐಶ್ವರ್ಯ ದೇವತೆ ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿ ಮೌಲ್ಯ ಸುಧಾರಿಸಬಹುದು ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದ ಕಂದ್ವಾ ನಲ್ಲಿ ಆಯೋಜಿಸಿದ್ದ ವಿವೇಕಾನಂದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿಯ ಮೌಲ್ಯ ಹೆಚ್ಚಬಹುದು' ಎಂದಿದ್ದಾರೆ.
ಜೆಎನ್ಯುದಲ್ಲಿ ಪೊಲೀಸ್ ಠಾಣೆ ಆರಂಭಿಸಿ: ಸುಬ್ರಮಣಿಯನ್ ಸ್ವಾಮಿ
ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು, ಇಂಡೋನೇಷ್ಯಾದ ಕರೆನ್ಸಿ ಮೇಲೆ ಗಣೇಶನ ಚಿತ್ರ ಮುದ್ರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಸುಬ್ರಹ್ಮಣಿಯನ್ ಸ್ವಾಮಿ ಮೇಲಿನಂತೆ ನುಡಿದರು.
'ಗಣೇಶ್ ಸಂಕಟಗಳನ್ನು ದೂರ ಮಾಡುವ ದೇವರು, ಆತನ ಚಿತ್ರ ಮುದ್ರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ಇದರ ನಿರ್ಧಾರವನ್ನು ಪ್ರಧಾನಿ ಮೋದಿ ಮಾಡಬೇಕು. ಐಶ್ವರ್ಯ ದೇವತೆ ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿ ಮೌಲ್ಯ ಹೆಚ್ಚಾಗಬಹುದು' ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೊಂದು ವಿವಾದಕರ ಮಾತನ್ನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಹಿಂದೂ ಮತ್ತು ಮುಸಲ್ಮಾನರ ರಕ್ತದ ಡಿಎನ್ಎ ಬ್ರಾಹ್ಮಣ ಮತ್ತು ದಲಿತರ ರಕ್ತದ ಡಿಎನ್ಎ ರೀತಿ ಒಂದೇ ಆಗಿದೆ' ಎಂದರು.
ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ: ಸುಬ್ರಮಣಿಯನ್ ಸ್ವಾಮಿ
ಸಿಎಎ ಬಗ್ಗೆಯೂ ಮಾತನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಕಾಂಗ್ರೆಸ್ ಮತ್ತು ಮಹಾತ್ಮಾ ಗಾಂಧಿ ಸಿಎಎ ಬೇಕು ಎಂದು ಕೇಳಿದ್ದರು. ಮನಮೋಹನ್ ಸಿಂಗ್ ಸಹ ಸಿಎಎ ಪರವಾಗಿ ಈ ಹಿಂದೆ ಮಾತನಾಡಿದ್ದರು. ಆದರೆ ಈಗ ಬೇಡ ಎನ್ನುತ್ತಿದ್ದಾರೆ' ಎಂದರು.