Video: ಆಹಾರಕ್ಕಾಗಿ ರೈಲಿನಲ್ಲಿ ಕಾರ್ಮಿಕರ ಹೊಡೆದಾಟ
ಭೂಪಾಲ್, ಮೇ 7: ಕೊರೊನಾ ಲಾಕ್ಡೌನ್ ಪರಿಣಾಮವಾಗಿ ರೈಲಿನಲ್ಲಿ ತವರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರು ಆಹಾರ ಪೊಟ್ಟಣಗಳಿಗಾಗಿ ರೈಲು ಬೋಗಿಯಲ್ಲೇ ಹೊಡೆದಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಂಗಳವಾರ ಮಹಾರಾಷ್ಟ್ರದಿಂದ ಬಿಹಾರಕ್ಕೆ ಹೊರಟಿದ್ದ ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಸತ್ನಾ ರೈಲ್ವೆ ನಿಲ್ದಾಣದಲ್ಲಿ ಈ ದೃಶ್ಯಗಳು ಕಂಡುಬಂದಿವೆ. ವಲಸೆ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲು ರೈಲ್ವೆ ಅಧಿಕಾರಿಗಳಿ ವ್ಯವಸ್ಥೆ ಮಾಡಿದ್ದರು.
ಈ ವೇಳೆ ಒಂದು ಗುಂಪು ಇನ್ನೊಂದು ಗುಂಪಿಗೆ ಆಹಾರ ಪೊಟ್ಟಣ ತಲುಪುವುದಕ್ಕೆ ಬಿಡದಿರುವುದನ್ನು ನೋಡಿ ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಬೆಲ್ಟ್ ಬಿಚ್ಚಿ ಹೊಡೆದಾಡಿಕೊಂಡಿದ್ದಾರೆ.
ಬೋಗಿಯ ಪ್ರತಿಯೊಬ್ಬ ಪ್ರಯಾಣಿಕರಿಗೂ ಬೇಕಾದ ಎಲ್ಲಾ ಆಹಾರ ಪ್ಯಾಕೆಟ್ಗಳನ್ನು ತಡೆಹಿಡಿದಿದ್ದಾರೆ ಎಂದು ಒಂದು ಗುಂಪು ಆರೋಪಿಸಿದೆ. ಅಂತಿಮವಾಗಿ ಕೆಲವು ಹಿರಿಯ ಸದಸ್ಯರು ಘರ್ಷಣೆಯನ್ನು ಕೊನೆಗೊಳಿಸಲು ಯಶಸ್ವಿಯಾದರು, ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.
मुंबई के कल्याण से चलकर दानापुर जा रही ट्रेन जब सतना पहुंची तो भूखे मज़दूर आपस में भिड़ गये, #COVID19outbreak का डर ऐसा कि पुलिस बाहर से ही डंडा बजाती रही! @ndtvindia #coronavirusinindia #lockdownextension #lockdownhustle #migrants #migranti @yadavtejashwi @digvijaya_28 pic.twitter.com/HZBCL5Ywid
— Anurag Dwary (@Anurag_Dwary) May 6, 2020
ಈ ರೈಲು 1,200 ವಲಸೆ ಕಾರ್ಮಿಕರೊಂದಿಗೆ ಮಂಗಳವಾರ ಮಹಾರಾಷ್ಟ್ರದ ಕಲ್ಯಾಣ್ನಿಂದ ಬಿಹಾರಕ್ಕೆ ತೆರಳಿತು.